Advertisement

ಕಾಂಗ್ರೆಸ್‌ ಶಾಸಕ ಅನರ್ಹ

12:30 AM Mar 06, 2019 | Team Udayavani |

ಅಹಮದಾಬಾದ್‌: ಖನಿಜ ಲೂಟಿ ಪ್ರಕರಣದಲ್ಲಿ 33 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ಶಾಸಕರೊಬ್ಬರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಪ್ರಕರಣದಲ್ಲಿ ತಲಾಲಾ ಕ್ಷೇತ್ರದ ಶಾಸಕ ಭಗವಾನ್‌ ಬರದ್‌ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅವರಿಗೆ 2 ವರ್ಷ 9 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತೀರ್ಪಿನ ಅಂಗೀಕೃತ ಪ್ರತಿ ತಲುಪುತ್ತಿದ್ದಂತೆ ರಾಜ್ಯ ಕಾನೂನು ಇಲಾಖೆ ಅದನ್ನು ವಿಧಾನಸಭಾಧ್ಯಕ್ಷ ಕಚೇರಿಗೆ ರವಾನಿಸಿದೆ. ತೀರ್ಪಿನ ಹಿನ್ನೆಲೆಯಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆ ಅನ್ವಯ, ಸ್ಪೀಕರ್‌ ರಾಜೇಂದ್ರ ಕುಮಾರ್‌ ಅವರು ಭಗವಾನ್‌ರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಹೀಗಾಗಿ, ಗುಜರಾತ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ 75ಕ್ಕೆ ಇಳಿದಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next