Advertisement

ಕಾಂಗ್ರೆಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

02:01 PM Dec 09, 2020 | Suhan S |

ಯಾದಗಿರಿ: ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಬೂತ್‌ ಮಟ್ಟದ ಕಾರ್ಯಕರ್ತರು ಒಗ್ಗಟ್ಟನಿಂದ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ್‌ ತುನ್ನೂರ ಹೇಳಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಇತ್ತೀಚೆಗೆದೋರನಹಳ್ಳಿ, ಹಯ್ನಾಳ, ನಾಯ್ಕಲ್‌, ಜಿಪಂ ವ್ಯಾಪ್ತಿಯ ಕಾರ್ಯಕರ್ತರನ್ನುಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಯಾವಾಗಲೂಬಡವರ, ದಿನದಲಿತರ, ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರಪರವಾರಿ ಅಭಿವೃದ್ಧಿ ಕೆಲಸ ಮಾಡಿದೆ ಎಂದರು.

ಮಾಜಿ ಕಾಡಾ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ್‌, ಸುರ್ದಶನ ನಾಯಕ, ಸುರೇಶ ಜೈನ್‌, ಮಾಣಿಕರೆಡ್ಡಿ ಕುರಕುಂದಿ, ಮಂಜುಳಾ ಗೂಳಿ, ಸಾಬರೆಡ್ಡಿ ಕಲಬುರಗಿ, ರಾಘವೇಂದ್ರ ಮಾನಸಗಲ್‌,ಶ್ಯಾಮಸನ್‌ ಮಾಳಿಕೇರಿ,ಮಲ್ಲಿಕಾರ್ಜುನ ಬಿರನೂರ್‌, ತಾಪಂ ಸದಸ್ಯ ನಿಜಗುಣ, ಮೋಹಿನ್‌ ನಾಯ್ಕಲ್‌, ಹಣಮಂತ ನಾಯಕ್‌ ಇದ್ದರು.

ಶಹಾಪುರ: ಯಥಾಸ್ಥಿತಿ ವ್ಯಾಪಾರ-ವಹಿವಾಟು :

ಶಹಾಪುರ: ಮಂಗಳವಾರ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ ಯಶಸ್ವಿ ಕಾಣಲಿಲ್ಲ. ಇಲ್ಲಿನ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರುನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್‌ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಈ ಸಂದರ್ಭದಲ್ಲಿ ಸಂಘದ ಮುಖಂಡ ಮಲ್ಲಣ್ಣ ಪರಿವಾಣ ಮಾತನಾಡಿದರು.ಭೀಮರಾಯ ಹುಲ್ಕಲ್‌, ಲಾಲಸಾಬ ಚೌದರಿ, ತಿಮ್ಮಣ್ಣ ಮುಂದಿನಮನಿ, ಸಂಗನಬಸಪ್ಪ ದಿಗ್ಗಿ, ಭೀಮಾಶಂಕರ ಸಲಾದಪುರ, ನಿಂಗಣ್ಣ ಟಿ.ವಡಿಗೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next