Advertisement

Congress ವರಿಷ್ಠರು ಇಂದು ರಾಜ್ಯಕ್ಕೆ :ಸಿಎಂ ನಿವಾಸದ ಸಭೆಗೆ ಎಲ್ಲ ಸಚಿವರಿಗೂ ಬುಲಾವ್‌

01:23 AM Aug 04, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರ ನೋಟಿಸ್‌ ಸಹಿತ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಇತ್ತೀಚೆಗಿನ ಬೆಳವಣಿಗೆಗಳ ಬೆನ್ನಲ್ಲೇ ಉಸ್ತುವಾರಿ ರಣದೀಪ್‌ಸಿಂಗ್‌ ಸುಜೇìವಾಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ರವಿವಾರ ಬೆಂಗ ಳೂರಿಗೆ ಆಗಮಿಸಲಿದ್ದು, ಸಂಜೆ ಸಿಎಂ ಅಧಿಕೃತ ನಿವಾಸಕ್ಕೆ ಬರುವಂತೆ ಎಲ್ಲ ಸಚಿವರಿಗೆ ಬುಲಾವ್‌ ನೀಡಲಾಗಿದೆ. ಈ “ಹೈವೋಲ್ಟೆàಜ್‌ ಸಭೆ’ ವಿಶೇಷ ಮಹತ್ವ ಪಡೆದುಕೊಂಡಿದೆ.

Advertisement

ರವಿವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿಗೆ ಬಂದಿಳಿಯುವ ಇಬ್ಬರೂ ನಾಯಕರು ಸಂಜೆ 4ಕ್ಕೆ ಸಿಎಂ ನಿವಾಸದಲ್ಲಿ ಸಭೆ ಕರೆದಿದ್ದಾರೆ. ಅದಕ್ಕೆ ಎಲ್ಲ ಸಚಿವರು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸಿಎಂ ಸುತ್ತಲಿನಲ್ಲೇ ಹಗರಣಗಳ ಆರೋಪಗಳು ಗಿರಕಿ ಹೊಡೆಯುತ್ತಿರುವುದರಿಂದ ಸಭೆಯ ಕೇಂದ್ರಬಿಂದು ಕೂಡ ಸ್ವತಃ ಸಿದ್ದರಾಮಯ್ಯ ಆಗಿರಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next