Advertisement

ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಹೋದರನ ಕಾರು ಹರಿದು ಇಬ್ಬರ ಸಾವು!

05:30 PM Apr 12, 2021 | Team Udayavani |

ಧಾರವಾಡ : ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರ ಕಾರು ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ಧಾರವಾಡದಲ್ಲಿ ನಡೆದಿದೆ.

Advertisement

ರಸ್ತೆ ಪಕ್ಕದಲ್ಲಿ ನಿಂತವರ ಮೇಲೆ ವಿಜಯ್ ಕುಲಕರ್ಣಿ ಕಾರು ಹರಿದಿದೆ ಎನ್ನಲಾಗಿದೆ. ಇಷ್ಟೆ ಅಲ್ಲದೆ ಕಾರು ಹೋದ ರಭಸಕ್ಕೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಸುಮಾರು ಐದಾರು ದ್ವಿಚಕ್ರ ವಾಹನಗಳು ಕೂಡ ಜಖಂಗೊಂಡಿವೆ ಎಂದು ವರದಿಯಾಗಿದೆ.

ಧಾರವಾಡ ನಗರದ ಕೆವಿಜಿ ಬ್ಯಾಂಕ್ ಎದುರು ಈ ಘಟನೆ ನಡೆದಿದೆ. ಇನ್ನು ಅಪ‍ಘಾತವಾಗುತ್ತಿದ್ದಂತೆ ವಿಜಯ್ ಕುಲಕರ್ಣಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಬೆಳಗಾವಿಯಿಂದ ಧಾರವಾಡಕ್ಕೆ ವಿಜಯ್ ಬರುವ ವೇಳೆ ಘಟನೆ ನಡೆದಿದೆಯಂತೆ. ಸದ್ಯ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next