Advertisement

“ಸೀತೆ’ಯ ವಸ್ತ್ರಾಪಹರಣ ಎಂದ ಸುರ್ಜೇವಾಲಾ!

08:50 PM Jun 09, 2022 | Team Udayavani |

ನವದೆಹಲಿ: ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಮಹಾಭಾರತದ ಕಥೆಯಲ್ಲಿ “ದ್ರೌಪದಿ’ಯ ಹೆಸರಿನ ಬದಲು “ಸೀತೆ’ಯನ್ನು ಹೆಸರಿಸಿ, ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ರಾಜಸ್ಥಾನದಿಂದ ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿಯಾಗಿರುವ ಅವರು, “ಬಹುಮತ ಗೆಲ್ಲುತ್ತದೆ, ಪ್ರಜಾಪ್ರಭುತ್ವ ಗೆಲ್ಲುತ್ತದೆ. ಸೀತಾ ಮಾತೆಯ ವಸ್ತ್ರಾಪಹರಣ ಮಾಡಿದವರು ನಾಶವಾದಂತೆ ಈಗ ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡುತ್ತಿರುವವರೂ ಸೋತು, ನಾಶವಾಗುತ್ತಾರೆ’ ಎಂದಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ್‌ ಸಿಂಗ್‌, “ಕಾಂಗ್ರೆಸ್‌ ಹಿಂದೂಗಳನ್ನು ಏಕಿಷ್ಟು ದ್ವೇಷಿಸುತ್ತದೆ. ಚುನಾವಣೆ ಸಮಯದಲ್ಲಿ ದೇವಸ್ಥಾನ ಸುತ್ತುವ ರಾಹುಲ್‌ ಗಾಂಧಿಗೆ ಹಿಂದುತ್ವ ಪದವೇ ಹಿಂಸೆಯೆನಿಸುತ್ತದೆ. ಪೂರ್ತಿ ಪಕ್ಷ ರಾಮನಿಗೆ ಅವಮಾನಿಸುತ್ತದೆ. ಈಗ ದ್ರೌಪದಿಯನ್ನು ಸೀತೆಯೆಂದು ಕರೆದು ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಲಾಗಿದೆ’ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next