Advertisement

ಜೆಡಿಎಸ್‌, ಕಾಂಗ್ರೆಸ್‌ನವರಿಂದಲೇ ದೇವೇಗೌಡರಿಗೆ ಸೋಲು: ಸುರೇಶ್‌ ಗೌಡ

09:59 AM May 08, 2019 | Vishnu Das |

ತುಮಕೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಜೆಡಿಎಸ್‌ ಮತ್ತು ಕಾಂಗ್ರೆಸ್‌ನವರೇ ಒಟ್ಟಾಗಿ ಸೋಲಿಸುವುದು ಖಚಿತ. ಮೇ 23 ರಂದು ಮೈತ್ರಿ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಮಾಜಿ ಬಿಜೆಪಿ ಶಾಸಕ ಸುರೇಶ್‌ ಗೌಡ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ಬಿಜೆಪಿಯವರು ಸೋಲಿಸಬೇಕೆಂದಿಲ್ಲ. ಅವರ ಕುಟುಂಬ ರಾಜಕಾರಣದಿಂದ ಬೆಸತ್ತು ಜೆಡಿಎಸ್‌ ಮತ್ತು ಕಾಂಗ್ರೆಸ್‌ನವರೇ ಸೋಲಿಸುವುದು ಮೇ 23 ಕ್ಕೆ ಗೊತ್ತಾಗಲಿದೆ.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ ಅವರೇ ದೇವೇಗೌಡರ ಪರ ಕೆಲಸ ಮಾಡಿಲ್ಲ ಎಂದರು.

ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿಗೆ ಈ ಬಾರಿ 10 ಸಾವಿರ ಮತಗಳ ಲೀಡ್‌ ಬರಲಿದೆ ಎಂದು ಸುರೇಶ್‌ಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next