ವಿದ್ಯಾರಣ್ಯಪುರಂನ ಬೂತಾಳೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಸವಲತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲ್ಲ ಎಂದು ಕೆಲವರು ಕನಸು ಕಾಣುತ್ತಿದ್ದರು. ಈಗಾಗಲೇ 3 ವರ್ಷ 9 ತಿಂಗಳು ಪೂರೈಸಿದ್ದೇನೆ. ಮುಂದೆಯೂ ತಾನೇ ಮುಖ್ಯಮಂತ್ರಿಯಾಗಿದ್ದು, ಐದು ವರ್ಷ ಪೂರೈಸುತ್ತೇನೆ. ಕೆಲ ಶಾಸ್ತ್ರದವರು ಸಿದ್ದರಾಮಯ್ಯ ಮುಂದಿನ ಬಜೆಟ್ ಮಂಡಿಸುವುದಿಲ್ಲ ಎನ್ನುತ್ತಿದ್ದರು. ಮುಖ್ಯಮಂತ್ರಿಯಾಗಿ ಮಾರ್ಚ್ ಎರಡನೇ ವಾರದಲ್ಲಿ ಐದನೇ ಬಜೆಟ್ ಕೂಡ ತಾನೇ ಮಂಡಿಸುತ್ತೇನೆ. ಅಷ್ಟೇ ಅಲ್ಲ ಮುಂದಿನ ಎರಡು ಬಜೆಟ್ ಕೂಡ ತಾನೇ ಮಂಡಿಸುತ್ತೇನೆ ಎಂದರು.
Advertisement
ಚುನಾವಣೆ ಪೂರ್ವದಲ್ಲಿ ಜನತೆಗೆ ಕೊಟ್ಟಿದ್ದ 165 ಭರವಸೆಗಳಲ್ಲಿ 125ಕ್ಕೂ ಹೆಚ್ಚು ಭರವಸೆ ಈಡೇರಿಸುವ ಮೂಲಕ ತಮ್ಮದು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ಎಂಬುದನ್ನು ತೋರಿಸಿದ್ದೇವೆ. ಪ್ರತಿ ವರ್ಷ ಪ್ರಣಾಳಿಕೆ ಇಟ್ಟುಕೊಂಡೇ ಆಯವ್ಯಯ ಸಿದ್ಧಪಡಿಸುವುದು ತನ್ನ ಪರಿಪಾಠ. ಈಡೇರಿಸಿದ ಭರವಸೆಗಳನ್ನು ಬಿಟ್ಟು ಪ್ರತಿ ವರ್ಷ ಬಜೆಟ್ನಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸೇರಿಸುತ್ತಾ ಹೋಗುತ್ತೇನೆ ಎಂದು ಹೇಳಿದರು.
ಇದು ಬಿಜೆಪಿ ಅಥವಾ ಜೆಡಿಎಸ್ ಮುಖಂಡರು ಮಾಡಿದ ಟೀಕೆಯಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತಿನ ಭರದಲ್ಲಿ ಮಾಡಿಕೊಂಡ ಯಡವಟ್ಟು. ತಕ್ಷಣ ಎಚ್ಚೆತ್ತುಕೊಂಡ ಅವರು ತಾವಾಡಿದ ಮಾತನ್ನು ಸರಿಪಡಿಸಿಕೊಂಡರು. ಭಾನುವಾರ ಮೈಸೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯೇತರ ರಾಜ್ಯಗಳನ್ನೇ ಗುರಿಯಾಗಿಸಿಕೊಂಡು ಆದಾಯ ತೆರಿಗೆ ದಾಳಿ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುವ ಭರದಲ್ಲಿ, ಗುಜರಾತ್ನ ಕಾಂಗ್ರೆಸ್ ನಾಯಕರ ಬಳಿ ಕಪ್ಪುಹಣ ಇಲ್ಲವೇ? ಅಲ್ಲೇಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ತಕ್ಷಣ ಎಚ್ಚೆತ್ತುಕೊಂಡು ಗುಜರಾತ್ ಬಿಜೆಪಿ ನಾಯಕರು ಎಂದು ಸರಿಪಡಿಸಿಕೊಂಡರು.