Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಬೇಕು ಎನ್ನುವ ಮನಸ್ಥಿತಿ ಇಲ್ಲ. ಅವರು ಯಾವಾಗಲೂ ನಕಾರಾತ್ಮಕವಾಗಿಯೇ ನೋಡುತ್ತಾರೆ. ಬ್ರಿಟಿಷರು ದೇವಾಲಯಗಳ ಆದಾಯದ ಮೇಲೆ ಕಣ್ಣಿಟ್ಟು ಅವುಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಆದರೂ ದೇವಸ್ಥಾನಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ದೇವಸ್ಥಾನ ಮುಟ್ಟಿದರೆ ಭಸ್ಮವಾಗುತ್ತೀರಿ ಎಂದಧ್ದಾರೆ. ಅವರು ವಸಿಷ್ಠರೂ ಅಲ್ಲ, ವಿಶ್ವಾಮಿತ್ರರೂ ಅಲ್ಲ. ಅವರು ಭಸ್ಮಾಸುರ ಆಗಿದ್ದರೆ ಅವರನ್ನೇ ಭಸ್ಮ ಮಾಡುವುದು ಹೇಗೆಂದು ನಮಗೆ ಗೊತ್ತು. ಅವರೇ ಸಿಬಿಐ, ಇಡಿ ಬಲೆಯಲ್ಲಿ ಸಿಲುಕಿದ್ದಾರೆ. ಬೇಲ್ ರದ್ದಾದರೆ, ಮತ್ತೆ ಒಳಗೆ ಹೋಗಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
Related Articles
Advertisement
ಮೇಕೆದಾಟು ಯೋಜನೆಗೆ ಪಾದಯಾತ್ರೆ ಗದ್ದುಗೆ ಗುದ್ದಾಟಕ್ಕೂ ನಡೆಸುತ್ತಾರೆ. ಆರೋಗ್ಯ ಸುಧಾರಣೆಗೆ ಪಾದಯಾತ್ರೆ ಮಾಡಿದರೆ ತೊಂದರೆ ಇಲ್ಲ. ಸುಳ್ಳು ಹೇಳಿಕೊಂಡು ಪಾದಯಾತ್ರೆ ಮಾಡಬಾರದು. ಡಿಕೆಶಿ ಡಿಪಿಆರ್ ತಮ್ಮ ಅವಧಿಯಲ್ಲಿ ಆಗಿದೆ ಅಂತಾರೆ ಆರು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು. ರಾಜ್ಯ ಸರ್ಕಾರ ಕೇಂದ್ರ ಜಲ ಶಕ್ತಿ ಇಲಾಖೆ ಜೊತೆ ಮಾಡಿ ಯೋಜನೆ ಜಾರಿಗೆ ಪ್ರಯತ್ನ ನಡೆಸಿದ್ದೇವೆ.ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಪರಿಸರ ಇಲಾಖೆಯ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಾರ ವಿರುದ್ಧ ಯಾವ ಉದ್ದೇಶಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಸಿ.ಟಿ.ರವಿ ಹೇಳಿದರು.
ಎರಡುವರೆ ವರ್ಷದಲ್ಲಿ ರಾಜ್ಯ ಸರ್ಕಾರ ಏನು ಮಾಡಿದೆ ಅಂತ ವಿಧಾನ ಮಂಡಲದಲ್ಲಿ ಕೇಳಲಿಲ್ಲ. ಸರ್ಕಾರ ಸಮಗ್ರ ಯೋಜನಾ ವರದಿಯನ್ನು ಅಪ್ ಲೊಡ್ ಮಾಡಿದೆ. ಆದರೂ ಅವರ ಉದ್ದೇಶ ಏನಿದೆ. ಹೋರಾಟ ಮಾಡುವುದು ತಪ್ಪಲ್ಲ. ಸಿದ್ದರಾಮಯ್ಯ ನ ವಿರುದ್ಧ ಮೇಲುಗೈ ಸಾಧಿಸಲು ಪಾದಯಾತ್ರೆ ಮಾಡುತ್ತಿದ್ದೇನೆ ಅಂತ ಹೇಳಲಿ.
ಪಕ್ಷದ ನಾಯಕತ್ವ ಯಾರದು ಎನ್ನುವುದು ಸಂಸದೀಯ ಮಂಡಳಿ ನಿರ್ಣಯ ಮಾಡುತ್ತದೆ.ಸಂಪುಟ ಪುನಾರಚನೆ ಕುರಿತು ಬೈಠಕ್ ನಲ್ಲಿ ಚರ್ಚೆ ಮಾಡುತ್ತೇವೆ. ಚುನಾವಣೆ ಸೋಲಿನ ಕುರಿತು ಚರ್ಚೆ ಮಾಡುತ್ತೇವೆ. ನಾವು ಐದಾರು ಸಾರಿ ಸೊತು ಒಂದೇ ಕುಟುಂಬಕ್ಕೆ ಜೋತು ಬಿದ್ದು ಕುಳಿತಿಲ್ಲ. ಸಚಿವ ಸ್ಥಾನ ಬಿಡುವುದು ತ್ಯಾಗವೂ ಅಲ್ಲ ಬಲಿದಾನವೂ ಅಲ್ಲ. ಇದು ಪಕ್ಷ ವಹಿಸುವ ಜವಾಬ್ದಾರಿ ಪಕ್ಷ ಯಾರಿಗೆ ಸೂಚನೆ ನೀಡುತ್ತದೆಯೋ ಅವರು ಅದರಂತೆ ನಡೆದುಕೊಳ್ಳುತ್ತಾರೆ. ನಾನು ಯಾವುದೇ ಹುದ್ದೆಯ ರೇಸ್ ನಲ್ಲಿ ಇಲ್ಲ. ಪಕ್ಷ ನೀಡುವ ಜಬಾಬ್ದಾರಿ ಮಾತ್ರ ನಿರ್ವಹಿಸುತ್ತೇನೆ ಎಂದರು.
ಡಿಕೆಶಿ – ಎಚ್ ಡಿಕೆ ಯಾವಾಗ ಏನು ಮಾಡುತ್ತಾರೆ ಏನ್ನುವುದು ಗೊತ್ತಿಲ್ಲ. ಇಬ್ಬರು ಜೋಡೆತ್ತು ಅಂದುಕೊಂಡಿದ್ದರು. ಈಗ ಇಬ್ಬರೂ ಕಣಿ ಹರಿದುಕೊಂಡಿದ್ದಾರಾ, ಯಾರು ಉಪ್ಪು ತಿಂದಿದ್ದಾರೊ ಅವರು ನೀರು ಕುಡಿಯಲೇಬೇಕು. ಇದಕ್ಕೆ ಡಿಕೆಶಿ ಕಾಂಗ್ರೆಸ್ ನಾಯಕರೇನು ಹೊರತಲ್ಲ. ಅವರೇನು ನಿತ್ಯ ಪತಿವೃತೆಯರಲ್ಲ ಎಂದು ಸಿ ಟಿ ರವಿ ಹೇಳಿದರು.