Advertisement

ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷ ಒಡ್ಡಿಲ್ಲ: ಬಿಎಸ್‌ವೈ

07:00 AM Jun 12, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕರಿಗೆ 50 ರಿಂದ 100 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂಬ ಆರೋಪಕ್ಕೆ ತೀಕ್ಷ್ಮ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಅವರೇ ನೀವು ಮತ್ತು ನಿಮ್ಮ ಪಕ್ಷ ಹೀನಾಯ ಸೋಲು ಅನುಭವಿಸಿದರೂ ನಿಮ್ಮ ದುರಂಹಕಾರ ಅಡಗಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. 

Advertisement

ಬಾದಾಮಿಯಲ್ಲಿ ಸಿದ್ದರಾಮಯ್ಯ ಮಾಡಿದ್ದ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ನಮ್ಮ ಪಕ್ಷವು ಯಾವುದೇ ಶಾಸಕರಿಗೆ ಹಣದ ಆಮಿಷ ಒಡ್ಡಿಲ್ಲ. ನಿಮ್ಮ ಆತ್ಮ ಸಾಕ್ಷಿ ಮತ್ತು ಜನತೆಯ ಅಭಿಮತಕ್ಕೆ ಅನುಗುಣವಾಗಿ ನನ್ನನ್ನು
ಬೆಂಬಲಿಸಿ ಎಂದು ಕೇಳಿದ್ದೆ ಎಂದು ಹೇಳಿದ್ದಾರೆ. 

ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿಯಿಂದಲೇ ಬಾದಾಮಿಗೆ ಹೋಗಿ ಅಲ್ಲಿ 1600 ಮತಗಳ ಪ್ರಯಾಸದ ಗೆಲುವು ಸಾಧಿಸಿದ್ದು ದೊಡ್ಡ ಸಾಧನೆ ಏನಲ್ಲ. ಜೆಡಿಎಸ್‌ನ ದೇವೇಗೌಡ-ಕುಮಾರಸ್ವಾಮಿ ಅಡಿಯಾಳಾಗಿ ಜನತೆ ಅಭಿಮತಕ್ಕೆ ವಿರುದ್ಧ ಸರ್ಕಾರ ರಚಿಸಿದ್ದೀರಿ. ನಿಮ್ಮ ಯಾವ ಸ್ವಾಭಿಮಾನದ ಸಂಕೇತ ಎಂದು ಪ್ರಶ್ನಿಸಿದ್ದಾರೆ.

ಆಮಿಷವೊಡ್ಡಿದ್ದ ಬಿಎಸ್‌ವೈ’ 
ಬಾದಾಮಿ: “
ಯಡಿಯೂರಪ್ಪ ಅವರು ನಮ್ಮ ಜೊತೆ ಬನ್ನಿ ಎಂದು ಶಾಸಕರಿಗೆ 50, 100 ಕೋಟಿ ಕೊಡುತ್ತೇವೆ ಎನ್ನುತ್ತಿದ್ದರು. ಆದರೆ, ಇನ್ನೊಂದೆಡೆ ಕಪ್ಪುಹಣ ಬ್ಯಾನ್‌ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ.
ಬೆಂಬಲ ಕೊಟ್ಟ ಶಾಸಕರಿಗೆ ಹಣವನ್ನು ಚೆಕ್‌ ಮೂಲಕ ಕೊಡುತ್ತಿದ್ದರಾ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಎಸ್‌ವೈ ವಿರುದ್ಧ ಹರಿಹಾಯ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿಯ ಆಮಿಷಗಳಿಗೆ ನಮ್ಮ ಶಾಸಕರು ಬಲಿಯಾಗಲಿಲ್ಲ. ರಾಜ್ಯದಲ್ಲಿ ನಮ್ಮ ಸೋಲಿಗೆ ಮೋದಿ, ಅಮಿತ್‌ ಶಾ, ಬಿಎಸ್‌ವೈ ಮಾಡಿದ ಅಪಪ್ರಚಾರ ಕಾರಣ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next