Advertisement

PM Modi; 10 ವರ್ಷದಲ್ಲಿ ಕಾಂಗ್ರೆಸ್‌ ಸಮರ್ಥ ವಿಪಕ್ಷವೂ ಆಗಲಿಲ್ಲ

02:27 AM Sep 27, 2024 | Team Udayavani |

ಚಂಡೀಗಢ: “ಕಾಂಗ್ರೆಸ್‌ ಆಡಳಿತಕ್ಕೇರುವುದು ಬಿಡಿ, 10 ವರ್ಷದಲ್ಲಿ ಸಮರ್ಥ ವಿಪಕ್ಷವಾಗುವಲ್ಲಿಯೂ ವಿಫ‌ಲ­ವಾ­­ಗಿದೆ. ಜನರ ಸಮಸ್ಯೆಗಳನ್ನು ಆಲಿಸು­ವುದು ಬಿಟ್ಟು, ಬರೀ ಒಳ ಜಗಳದಲ್ಲಿಯೇ ಕಾಲ ಕಳೆದಿರುವುದು, ಅವರ ಆಂತರಿಕ ಭಿನ್ನ­ಮತ ಹರಿಯಾಣದ ಮಗುವಿಗೂಗೊತ್ತಿದೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಚಾಟಿ ಬೀಸಿದ್ದಾರೆ.

Advertisement

“ಮೇರಾ ಬೂತ್‌,ಸಬ್ಸೇ ಮಜಬೂತ್‌’ ಕಾರ್ಯಕ್ರಮದ ಅನ್ವಯ ಚುನಾವಣೆ ಹೊಸ್ತಿಲಿನಲ್ಲಿರುವ ಹರಿಯಾಣ ದಲ್ಲಿ ಬೂತ್‌ ಮಟ್ಟದ ಪ್ರಚಾರದ ಕುರಿತು ನಮೋ ಆ್ಯಪ್‌ ಮೂಲಕ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ಸಂವಾದ ನಡೆಸಿದ್ದಾರೆ.

ಈ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದು, ಕಾಂಗ್ರೆಸಿ­ಗರು ಸುಳ್ಳು ಹೇಳುತ್ತಾರೆ. ಅವರ ವಾದಗಳಿಗೆ ತಲೆಯೂ ಇಲ್ಲ, ಬುಡವೂ ಇಲ್ಲ ಎಂದರು. ಕಾಂಗ್ರೆಸಿ­ಗರು ಚುನಾವಣೆ ಗೆಲ್ಲಲ್ಲು ಹೇಗೆ ಸುಳ್ಳನ್ನು ಸುರಿಯುತ್ತಾರೆ ಎಂಬುದಕ್ಕೆ ಹಿಮಾಚಲ ಪ್ರದೇಶವೇ ಸಾಕ್ಷಿ. ಕಾಂಗ್ರೆಸ್‌ ನಾಯಕರು ಹಳೆ ಪಿಂಚಣಿ ಬಗ್ಗೆ ಮಾತನಾಡುತ್ತಿದ್ದರು. ಈಗ ಪಿಂಚಣಿ ವಿಚಾರ ಹಾಗಿರಲಿ, ಅಲ್ಲೀಗ ಕೆಲಸಗಳಿಗೆ ನೇಮಕಾತಿಯೂ ಇಲ್ಲ, ಸಂಬಳವೂ ಕೊಡ­ಲಾಗುತ್ತಿಲ್ಲ ಎಂದು ಪ್ರಧಾನಿ ಚಾಟಿ ಬೀಸಿದ್ದಾರೆ. ಇದೇ ವೇಳೆ ಮುಕೇಶ್‌ ಸೈನಿ ಎಂಬ ಚಾಯ್‌ವಾಲಾ ಜತೆಗೆ ಮಾತನಾಡಿ, ನಾನೂ ಚಾಯ್‌ವಾಲಾ ನಾನೂ ನಿನ್ನ ಸಹೋದರ ಎಂದು ಮೋದಿ ಆತ್ಮೀಯತೆ ತೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next