Advertisement

ಅಗ್ನಿಪಥ್ ಯೋಜನೆ ವಿರುದ್ಧ ಹೋರಾಟ: ರಾಜ್ಯ ಹಿರಿಯ ನಾಯಕರಿಗೆ ಕೈ ಹೈಕಮಾಂಡ್ ಬುಲಾವ್

12:18 PM Jun 21, 2022 | Team Udayavani |

ಬೆಂಗಳೂರು: ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲು ಚರ್ಚೆ ನಡೆಸುವುದಕ್ಕಾಗಿ ಉಭಯ ಸದನದ ವಿಪಕ್ಷ ನಾಯಕರು ಸೇರಿದಂತೆ ಹಿರಿಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ತುರ್ತು ಬುಲಾವ್ ನೀಡಿದೆ.

Advertisement

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಇಂದು ಸಂಜೆ ಆರು ಗಂಟೆಗೆ ಬಿ.ಕೆ ಹರಿಪ್ರಸಾದ್ ದೆಹಲಿಗೆ ತೆರಳಲಿದ್ದಾರೆ. ಬಿ.ಕೆ ಹರಿಪ್ರಸಾದ್ ಜೊತೆಗೆ ಎಲ್ಲಾ ಎಂಎಲ್ ಸಿಗಳಿಗೆ ದಿಲ್ಲಿಗೆ ತೆರಳುತ್ತಾರೆ.

ಇದನ್ನೂಓದಿ:ಮೈಸೂರು: ಆಯುಷ್ ಪ್ರದರ್ಶನ ಮಳಿಗೆ ಉದ್ಘಾಟಿಸಿದ ಪ್ರಧಾನಿ ಮೋದಿ

“ಅಗ್ನಿಪಥ್” ಯೋಜನೆ ಕುರಿತು ಗಂಭೀರ ಚರ್ಚೆ ನಡೆಸಲಿರುವ ಕಾಂಗ್ರೆಸ್ ಹೈಕಮಾಂಡ್ ಎಲ್ಲ ರಾಜ್ಯಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next