Advertisement

ರಾಹುಲ್‌ ಯಾತ್ರೆಗೆ ಬಂದ ನಟಿ ರಮ್ಯಾಗೆ ಸಭೆಗೆ ಸಿಗಲಿಲ್ಲ ಪ್ರವೇಶ!

10:51 PM Oct 23, 2022 | Team Udayavani |

ರಾಯಚೂರು: ಭಾರತ್‌ ಜೋಡೋ ಯಾತ್ರೆಯಲ್ಲಿ ದಿಢೀರ್‌ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದ ನಟಿ ರಮ್ಯಾ ಅವರು ಬಂದ ವೇಗದಲ್ಲೇ ಮರಳಿದ್ದು, ಇದು ಸಾಕಷ್ಟು ಕುತೂಹಲ ಮೂಡಿಸಿದೆ.

Advertisement

ಮೂಲಗಳ ಪ್ರಕಾರ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಪಕ್ಷದ ನಾಯಕಿ ಎನ್ನುವ ಕಾರಣಕ್ಕೆ ಸ್ವ ಪ್ರೇರಣೆಯಿಂದ ಯಾತ್ರೆಯಲ್ಲಿ ಭಾಗಿ ಯಾದರೂ ಹೆಚ್ಚು ಹೊತ್ತು ಉಳಿಯದೆ ತರಾತುರಿಯಲ್ಲೇ ಮರಳಿದ್ದು ಯಾಕೆ ಎನ್ನುವ ಪ್ರಶ್ನೆಯೂ ಮೂಡಿದೆ.

ವಾಲ್ಕಟ್‌ ಮೈದಾನದಲ್ಲಿ ಹಾಕಿದ್ದ ಬೃಹತ್‌ ವೇದಿಕೆಯಲ್ಲಿ ನಡೆದ ಸಭೆ ಯಲ್ಲಿ ರಮ್ಯಾಗೆ ಪ್ರವೇಶ ನಿರಾ ಕರಿಸಲಾಗಿದೆ. ವೇದಿಕೆ ಗಣ್ಯರ ಪಟ್ಟಿಯಲ್ಲಿ ರಮ್ಯಾ ಹೆಸರು ಇಲ್ಲದ ಕಾರಣಕ್ಕೆ ಭದ್ರತಾ ಪಡೆ ಅವರನ್ನು ತಡೆದಿದೆ. ಆದರೆ ರಾಹುಲ್‌ ಅಥವಾ ರಾಜ್ಯ ನಾಯಕರಾಗಲಿ ಅವರನ್ನು ವೇದಿಕೆಗೆ ಕರೆಸಲು ಮನಸ್ಸು ಮಾಡಿಲ್ಲ. ಸ್ಥಳೀಯ ನಾಯಕರು ಶ್ರಮಿಸಿದರೂ ಫಲಪ್ರದವಾಗಿಲ್ಲ. ಪರಿಣಾಮ ರಮ್ಯಾ ಕೋಪಗೊಂಡು ಮರಳಿದ್ದಾರೆ ಎನ್ನಲಾಗುತ್ತಿದೆ.

ಚರ್ಚೆಗೀಡಾದ ರಮ್ಯಾ
ಯಾತ್ರೆಯಲ್ಲಿ ದಿಢೀರ್‌ ಆಗಿ ರಮ್ಯಾ ಕಾಣಿಸಿಕೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 500 ಕಿ.ಮೀ. ಯಾತ್ರೆ ಸಾಗಿದರೂ ಎಲ್ಲಿಯೂ ಕಂಡು ಬರದಿದ್ದ ಅವರು ಕೊನೆ ಕ್ಷಣದಲ್ಲಿ ರಾಯಚೂರಿನಲ್ಲಿ ಪಾಲ್ಗೊಂಡದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಮಂಡ್ಯ ಸಂಸತ್‌ ಕ್ಷೇತ್ರದಿಂದ ಅಥವಾ ರಾಯಚೂರು ನಗರ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದ ಅವರು ಯಾತ್ರೆಯಲ್ಲಿ ಭಾಗಿಯಾಗಿರಬಹುದು ಎನ್ನಲಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next