Advertisement
ಎಲ್ಲ 57 ಸಾವಿರ ಬೂತ್ ಮಟ್ಟದ ಪದಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಪ್ರತೀ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅನು ಷ್ಠಾನಗೊಳಿಸಿದ ಯೋಜನೆ ಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರಿಸಲು ಸೂಚಿಸಲಾಗಿದೆ. ಕಾರ್ಯಕರ್ತರ ಪಡೆ ರಚಿಸಿ ನಡೆಸುವ ಅಭಿಯಾನ ಹಾಗೂ ಮನೆ ಭೇಟಿ ಬಗ್ಗೆ ಎಐಸಿಸಿಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಭಾರತ್ ಜೋಡೋ ಬಳಿಕ ಜನವರಿಯಿಂದ ಹಾಥ್ ಸೆ ಹಾಥ್ ಜೋಡೋ ಅಭಿಯಾನಕ್ಕೆ ಕಾಂಗ್ರೆಸ್ ಮುಂದಾಗಿದೆ.
Related Articles
ಡಿ.30- ವಿಜಯಪುರ, ಜ.2- ಹುಬ್ಬಳ್ಳಿ- ಧಾರವಾಡ, ಜ.10-ಚಿತ್ರದುರ್ಗದಲ್ಲಿ ಸಮಾವೇಶ ನಡೆ ಯ ಲಿದೆ. ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವ ದಲ್ಲಿ ಜಂಟಿ ಬಸ್ ಯಾತ್ರೆ ಜ.11ರಿಂದ ಆರಂಭ ವಾಗಲಿದೆ. ಜನವರಿ 28ರವರೆಗೆ ಸತತ 22 ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು 44 ಜಿಲ್ಲಾ ಮಟ್ಟದ ನಾಯಕರ ಸಭೆ ಆಯೋಜಿಸಲಾಗಿದೆ.
Advertisement
ಇದಾದ ನಂತರ ಜ.30 ರಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಯಾತ್ರೆ ಹೊರಡಲಿದ್ದು ಎರಡು ತಿಂಗಳ ಕಾಲ 224 ವಿಧಾನಸಭೆ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.