Advertisement

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ

06:29 AM Jul 03, 2020 | Lakshmi GovindaRaj |

ಕುಣಿಗಲ್‌: ಕಾಂಗ್ರೆಸ್‌ ಕಾರ್ಯಕರ್ತರು 50 ಸಾವಿರ ಡ್ರೈ ಜಾಮೂನ್‌, 15 ಸಾವಿರ ಲಾಡು ವಿತರಣೆ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಹಾಗೂ ಪ್ರತಿಜ್ಞಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿದರು.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಹಾಗೂ ಪ್ರತಿಜ್ಞಾ ದಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯ ಕರ್ತರು, ಮುಖಂಡರು, ಜನಪ್ರತಿನಿಧಿ ಗಳು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ 40 ಎಲ್‌ಇಡಿ ಟಿ.ವಿ.  ಅಳ ವಡಿಸುವ ಮೂಲಕ ಪ್ರದಗ್ರಹಣ ಕಾರ್ಯ ಕ್ರಮವನ್ನು ಜನರು ನೇರವಾಗಿ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣದ ಡಾ. ರಾಜ್‌ ಅಭಿಮಾನಿ ಸಂಘದ ಕಚೇರಿ ಎದುರು, ಹಾಕಲಾಗಿದ್ದ ಬೃಹತ್‌ ವೇದಿಯಲ್ಲಿ  ಪುರಸಭಾ ಸದಸ್ಯ ರಂಗಸ್ವಾಮಿ ತಾಲೂಕಿನ 36 ಹಿರಿಯ ಕಾಂಗ್ರೆಸ್‌ ಕಾರ್ಯಕರ್ತರನ್ನು ಸನ್ಮಾನಿ ಸಿದರು. ಪುರಸಭಾ ಸದಸ್ಯರಾದ ಬಿ.ಎನ್‌.ಅರುಣ್‌ಕುಮಾರ್‌, ಮಂಜುಳಾ, ರಾಮು, ನಾಗರಾಜು, ಮಾಜಿ ಸದಸ್ಯ ಶಂಕರ್‌ ಅವರು ಹುಚ್ಚಮಾಸ್ತಿಗೌಡ  ಸರ್ಕಲ್‌ ಬಳಿ ಕಾರ್ಯಕ್ರಮ ಆಯೋ ಜಿಸಿ ಸಸಿಗಳನ್ನು ವಿತರಿಸಿದರು.

ಪುರಸಭಾ ಸದಸ್ಯ ರಂಗಸ್ವಾಮಿ ಮಾತನಾಡಿ, ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ರಾಗಿ, ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಟ್ರಬಲ್‌  ಶೂಟರ್‌ ಡಿಕೆಶಿ ಅವರ ಪಕ್ಷ ನಿಷ್ಠೆ ಹಾಗೂ ಪ್ರಮಾಣಿಕತೆ ಗುರುತಿಸಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಪಕ್ಷಕ್ಕೆ ಆನೆ ಬಲ ಬಂದತ್ತಾಗಿದೆ. ಮುಂದಿನ ಚುನಾವಣೆ ಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತ  ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next