Advertisement

Congrees Conspiracy: ಹಾಸನದಿಂದ ರೇವಣ್ಣ ಕುಟುಂಬ ಹೊರಹಾಕಲು ಷಡ್ಯಂತ್ರ: ಸೂರಜ್‌ ರೇವಣ್ಣ

11:56 PM Aug 25, 2024 | Team Udayavani |

ಹಾಸನ: ಎಚ್‌.ಡಿ. ರೇವಣ್ಣ ಕುಟುಂಬವನ್ನು ಹೇಗಾದರೂ ಮಾಡಿ ಹಾಸನ ಜಿಲ್ಲೆಯ ರಾಜಕಾರಣದಿಂದ ಹೊರ ಹಾಕಬೇಕೆಂದು ರಾಜ್ಯದ ಕಾಂಗ್ರೆಸ್‌ ಸರಕಾರ ಷಡ್ಯಂತ್ರ ನಡೆಸಿದೆ. ಕಾಂಗ್ರೆಸ್‌ನವರ ಕುತಂತ್ರವನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ| ಸೂರಜ್‌ ರೇವಣ್ಣ ಹೇಳಿದರು.

Advertisement

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಅಶ್ಲೀಲ ವೀಡಿಯೋದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿ ಬಿಡುಗಡೆ ಮಾಡಿದವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬುದಕ್ಕೆ ಗೃಹಸಚಿವರು, ಡಿಐಜಿಯವರು ಉತ್ತರಿಸಬೇಕು. ಪೆನ್‌ಡ್ರೈವ್‌ ಹಂಚಿಕೆ ಮಾಡಿದವರಲ್ಲಿ ಯಾರೊಬ್ಬರನ್ನೂ ಬಂಧಿಸಿಲ್ಲ. ಇದರಲ್ಲೇ ಗೊತ್ತಾಗುತ್ತದೆ ಸರಕಾರ ಷಡ್ಯಂತ್ರ ನಡೆಸುತ್ತಿದೆ ಎಂಬುದು. ಸದ್ಯದಲ್ಲೇ ಇದೆಲ್ಲವನ್ನು ಬಿಚ್ಚಿಡುತ್ತೇನೆ ಎಂದರು.

ನಮ್ಮ ಮೇಲೆ ಕುತಂತ್ರ, ಷಡ್ಯಂತ್ರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ಕೊಡುತ್ತೇನೆ. ರೇವಣ್ಣನವರು ಯಾವ ಪ್ರಕರಣದಲ್ಲೂ ಸಂಬಂಧವೇ ಇಲ್ಲ. ಅವರನ್ನೂ ಜೈಲಿಗೆ ಹಾಕಿಸಿದರು. ಭವಾನಿ ರೇವಣ್ಣ ಟೆರರಿಸ್ಟಾ ?, ಅವರನ್ನು ಜೈಲಿಗೆ ಕಳುಹಿಸಲು 50 ಲಕ್ಷ ರೂ. ಸರಕಾರದ ಹಣ ಖರ್ಚು ಮಾಡಬೇಕಾ? ಎಂದು ಸರಕಾರದ ವಿರುದ್ಧ ಡಾ| ಸೂರಜ್‌ ರೇವಣ್ಣ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next