Advertisement

ಕವಿ ಡುಂಡಿರಾಜ್‌ಗೆ ನಾಡಿದ್ದು ಅಭಿನಂದನೆ

11:18 AM May 05, 2017 | |

ಬೆಂಗಳೂರು: ಉಪಾಸನಾ ಟ್ರಸ್ಟ್‌ ಹಾಗೂ ಎಚ್‌. ಡುಂಡಿರಾಜ್‌ ಅಭಿನಂದನಾ ಸಮಿತಿ ಸಂಯುಕ್ತ ವಾಗಿ ಭಾನುವಾರ ಸಂಜೆ 7ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ “ಡುಂಡಿ-60′ ಅಭಿನಂದನೆ-ಪುಸ್ತಕ ಲೋಕಾರ್ಪಣೆ, ಗೀತ ಗಾಯನ ಹಮ್ಮಿಕೊಂಡಿದೆ.  

Advertisement

ಎಚ್‌. ಡುಂಡಿರಾಜ್‌ ಅವರ “ಇಡಿ ಕಿಡಿ ಕವನಗಳು’ (ಆಯ್ದ ಕವಿತೆಗಳು) ಹಾಗೂ ಹನಿ ಖಜಾನೆ (ಹನಿಗವನಗಳು 7ನೇ ಮುದ್ರಣ) ಕೃತಿಗಳು ಬಿಡು ಗಡೆಗೊಳ್ಳಲಿದ್ದು, ಸಾಹಿತಿ ಡಾ.ಚಂದ್ರಶೇಖರ ಕಂಬಾರ ಲೋಕಾರ್ಪಣೆ ಮಾಡಲಿದ್ದಾರೆ.

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಕವಿ ಬಿ.ಆರ್‌. ಲಕ್ಷ್ಮಣರಾವ್‌ ಭಾಗವಹಿಸಲಿದ್ದಾರೆ. ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಸನಾ ಮೋಹನ್‌, ಪಂಚಮ್‌ ಹಳಿಬಂಡಿ, ನಾಗಚಂದ್ರಿಕಾ ಭಟ್‌, ಮೇಘನಾ ಭಟ್‌ ಗೀತಗಾಯನ ನಡೆಸಿಕೊಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next