Advertisement

ರಾಷ್ಟ್ರದ ಬಲಾಡ್ಯತೆಗೆ ಕಾನೂಬದ್ಧ ವಯಸ್ಸು ಬಹುದೊಡ್ಡ ವರದಾನ: ಸಂಸದ ಗೋಪಾಲ್‌ ಶೆಟ್ಟಿ

11:35 AM Dec 19, 2021 | Team Udayavani |

ಮುಂಬಯಿ: ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು 21ಕ್ಕೆ ಪರಿಷ್ಕರಿಸಿ ಮಸೂದೆ ಮಂಡಿಸಿ ಅನುಮೋದನೆ ಪಡೆದ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಹೆಣ್ಣು ಮಕ್ಕಳ ವಿವಾಹದ ಕಾನೂಬದ್ಧ ವಯಸ್ಸಿನ ಪರಿಷ್ಕರಣೆ ಬಹುದೊಡ್ಡ ವರದಾನವಾಗಿದೆ. ಈ ಹಿನ್ನಲೆಯಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರದ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಉತ್ತರ ಮುಂಬಯಿ ಸಂಸದ ಗೋಪಾಲ ಸಿ. ಶೆಟ್ಟಿ ತಿಳಿಸಿದರು.

Advertisement

ಸಂಸದ ಗೋಪಾಲ್‌ ಶೆಟ್ಟಿ ಅವರ ಪ್ರಸ್ತಾವನೆಯಂತೆ ವಿವಾಹ ಕಾನೂಬದ್ಧ ವಯಸ್ಸು ಅಂಗೀಕಾರಕ್ಕೆ ಮನ್ನಣೆ ದೊರೆತೆ ಪ್ರಯುಕ್ತ ಶನಿವಾರ ಬೆಳಗ್ಗೆ ಕಾಂದಿವಲಿ ಪಶ್ಚಿಮದ ಪೊಯಿಸರ್‌ ಜಿಮ್ಖಾನದಲ್ಲಿ ಸಂಸದ ಗೋಪಾಲ್‌ ಸಿ. ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗ ಮುಂಬಯಿ ವತಿಯಿಂದ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಸಿದ್ದು ಸೂಕ್ತ ನಿರ್ಧಾರವಾಗಿದೆ. ಈ ಕಾಯ್ದೆಯಿಂದ ಭವಿಷ್ಯದಲ್ಲಿ ರಾಷ್ಟ್ರದಲ್ಲಿ ಮಹತ್ತರವಾದ ಬದಲಾವಣೆ ಕಾಣಲಿದೆ. ಶಾಲಾ ಕಾಲೇಜು ಹೋಗುವ ಮಕ್ಕಳು ಪ್ರೇಮಕ್ಕೆ ಒಳಗಾಗಿ ಹೆತ್ತವರ ಅನಿಮತಿಯಿಲ್ಲದೇ 18ನೇ ವಯಸ್ಸಿನಲ್ಲೇ ರಿಜಿಸ್ಟರ್‌ ಮದುವೆ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. ನಮ್ಮಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ವ್ಯಕ್ತಿ ಸ್ವತಂತ್ರ್ಯ ಎಲ್ಲವೂ ಇದ್ದೂ ಇದು ಕಾನೂಬದ್ಧ ವಯಸ್ಸಿನ ಮುಂದೆ ನಿಷ್ಕ್ರಿಯವಾಗುತ್ತಿವೆ. ದಾಂಪತ್ಯ ಬಾಳಿನುದ್ದಕ್ಕೂ ಅದೆಷ್ಟೋ ಕಷ್ಟನಷ್ಟಗಳನ್ನು ಅನುಭವಿಸಿ ತ್ಯಾಗಮಯ ಬದುಕಿನೊಂದಿಗೆ ಮಕ್ಕಳನ್ನು ಓದಿಸಿ ದೊಡ್ಡವರನ್ನಾಗಿ ಮಾಡಿ ಮಕ್ಕಳ ಬಗ್ಗೆ ಭವ್ಯ ಕನಸುಗಳನ್ನು ಕಾಣುವ ಮಾತಾಪಿತಾರಿಗೂ ವ್ಯಕ್ತಿ ಸ್ವತಂತ್ರ್ಯ ಕಂಡುಕೊಳ್ಳಲು ಇಂತಹ ಕಾಯ್ದೆ ಫಲಕಾರಿಯಾಗಲಿದೆ ಎಂದು ನುಡಿದರು.

ಇಂತಹ ವಿಚಾರವಾಗಿ ದಿನಂಪ್ರತಿ ನನ್ನಲ್ಲಿಗೆ ಬಹಳಷ್ಟು ಮಕ್ಕಳ ಪೋಷಕರು ಬಂದು ತಮ್ಮ ಮಕ್ಕಳ ಬಗ್ಗೆ ಬೇಸರ ತೋಡಿಕೊಳ್ಳುತ್ತಾರೆ. 18ರ ವಯಸ್ಸಿನ ಮತ್ತು 21ರ ಮಧ್ಯೆ ಮಕ್ಕಳ ಪ್ರಬುದ್ಧತೆಯ ಮಟ್ಟದಲ್ಲೂ ಬಹಳಷ್ಟು ವ್ಯತ್ಯಾಸ ವಾಗುತ್ತೆ. ಮಾತ್ರವಲ್ಲದೆ ಇದೊಂದು ಬದಲಾ ವಣೆಯ ಆವರ್ತಿಯೂ ಹೌದು. 21ರಲ್ಲಿ ಮಕ್ಕಳು ಪರಿಪಕ್ವರಾಗಿ ಸ್ವಂತ ಕಾಲಲ್ಲಿ ನಿಂತು ನೌಕರಿಗೂ ಸೇರಿ ಸ್ವತಃ ಗಳಿಕೆಯಲ್ಲಿ ತೊಡಗಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಸ್ವತಂತ್ರರಾಗುತ್ತಾರೆ. ಇದರಿಂದ ಮಕ್ಕಳ ಜೀವನದಲ್ಲಿ ಬಹುದೊಡ್ಡ ಪರಿವರ್ತನೆ ಸಾಧ್ಯವಾಗುವುದು ಎಂದು ನುಡಿದು, ಮೋದಿ ಸರಕಾರದ ಧ್ಯೇಯದಂತೆ ಬೇಟಿ ಬಚಾವೋ, ಬೇಟಿ ಪಡಾವೋ ಸಂದೇಶ ನೀಡಿದ್ದರು. ಇದರಿಂದ ದೇಶದಲ್ಲಿ ಬಹಳವಾದ ಪರಿವರ್ತನೆಯಾಗಿದೆ. ಮುಂದಿನ ದಿನಗಳಲ್ಲೂ ರಾಷ್ಟ್ರದಲ್ಲಿ ಬಹಳಷ್ಟು ಬದಲಾವಣೆ ಕಾಣಲಿದೆ. ಕಳೆದ ವರ್ಷ ಪ್ರಧಾನಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರಾಷ್ಟ್ರದ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮದುವೆ ವಯಸ್ಸು ಪರಿಷ್ಕರಿಸುವ ಬಗ್ಗೆ ಉಲ್ಲೇಖೀಸಿರುವುದನ್ನು ಸಂಸದ ಗೋಪಾಲ್‌ ಶೆಟ್ಟಿ ಪ್ರಸ್ತಾವಿಸಿದರು.

ಉಷಾ ಗೋಪಾಲ್‌ ಶೆಟ್ಟಿ, ನಿಟ್ಟೆ ಎಂ. ಜಿ. ಶೆಟ್ಟಿ, ಜ್ಯೋತಿ ಶೆಟ್ಟಿ, ಪೊಯಿಸಾರ್‌ ಜಿಮ್ಖಾನದ ಕರುಣಾಕರ್‌ ಶೆಟ್ಟಿ, ರವೀಂದ್ರ ಎಸ್‌. ಶೆಟ್ಟಿ, ಶೈಲಜಾ ಅಮರನಾಥ್‌ ಶೆಟ್ಟಿ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಪ್ರಕಾಶ್‌ ಎ. ಶೆಟ್ಟಿ ಕಳತ್ತೂರು ಎಲ್‌ಐಸಿ, ವಿಜಯ ಆರ್‌. ಭಂಡಾರಿ, ಮನೋಹರ್‌ ಎನ್‌. ಶೆಟ್ಟಿ, ಶಾಂತಾ ಎನ್‌. ಭಟ್‌ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಮತ್ತು ಸದಸ್ಯರು, ಬಿಜೆಪಿ ಧುರೀಣರು, ಕಾರ್ಯಕರ್ತರು ಉಪಸ್ಥಿತರಿದ್ದು ಸಂಸದರನ್ನು ಅಭಿನಂದಿಸಿ ಶುಭಹಾರೈಸಿದರು. ಬಿಜೆಪಿ ನಾಯಕ, ಸಂಘಟಕ ಎರ್ಮಾಳ್‌ ಹರೀಶ್‌ ಶೆಟ್ಟಿ ಸ್ವಾಗತಿಸಿದರು. ರಘುನಾಥ್‌ ಎನ್‌. ಶೆಟ್ಟಿ ಕಾಂದಿವಿಲಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ್‌ ಎಸ್‌. ಶೆಟ್ಟಿ ವಂದಿಸಿದರು.

ಬಿಜೆಪಿ ಉತ್ತರ ಮುಂಬಯಿ ಸಂಸದ ಗೋಪಾಲ್‌ ಶೆಟ್ಟಿ ಅವರ ಮಾನವೀಯ ಸೇವೆಗಳು ಇತರರಿಗೆ ಮಾದರಿಯಾಗಿದೆ. ಅವರು ಕೇವಲ ರಾಜಕೀಯದಲ್ಲಿ ತೊಡಗಿಸಿಕೊಳ್ಳದೆ ತಮ್ಮ ಜೀವನವನ್ನೇ ತಮ್ಮ ಕ್ಷೇತ್ರದ ಜನರಿಗಾಗಿ ಮುಡಿಪಾಗಿಸಿಕೊಂಡವರು. ಈ ಕಾರಣದಿಂದಲೇ ದ್ವಿತೀಯ ಬಾರಿಗೆ ಕಣಕ್ಕಿಳಿದು ಅಭೂತಪೂರ್ವ ಜಯ ಗಳಿಸಿದ್ದಾರೆ. ಸದಾ ಜನಪರ ಸೇವಾ ಕಾಳಜಿ ಹೊಂದಿ ಸಾರ್ವಜನಿಕ ಹಿತದೃಷ್ಟಿಯಿಂದ ಸಾಮಾಜಿಕ ಪಿಡುಗು ಹಾಗೂ ತೊಂದರೆಗಳನ್ನು ನಿವಾರಿಸಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಓರ್ವ ನಿಷ್ಠಾವಂತ ಜನಪ್ರತಿನಿಧಿಯಾಗಿದ್ದಾರೆ. ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಸುವಲ್ಲಿ ನಮ್ಮ ಸಂಸದರ ಪ್ರಯತ್ನಕ್ಕೆ ದೊರೆತ ಬಲು ದೊಡ್ಡ ಯಶಸ್ಸು. ಅವರಲ್ಲಿನ ರಾಷ್ಟ್ರಾಭಿಮಾನ ನಮ್ಮೆಲ್ಲರಿಗೂ ಮಾದರಿಯಾಗಿದೆ. ಎರ್ಮಾಳ್‌ ಹರೀಶ್‌ ಶೆಟ್ಟಿ, ಸಂಚಾಲಕ, ಸಂಸದ ಗೋಪಾಲ್‌ ಸಿ. ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗ

Advertisement

-ಚಿತ್ರ –ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next