Advertisement

ಕಾಂಗ್ರೆಸ್‌ ನಿಂದ ತುಷ್ಟೀಕರಣ ನೀತಿ: ಸಚಿವ ಅಮಿತ್‌ ಶಾ

11:16 PM Sep 10, 2022 | Team Udayavani |

ಜೋಧ್‌ಪುರ: ಕಾಂಗ್ರೆಸ್‌ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

Advertisement

ಜೋಧ್‌ಪುರ ಮತ್ತು ಜೈಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಬ್ರಾ, ಭಿಲ್ವಾರಾ, ಕರೌಲಿ, ಜೋಧ್‌ಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ಕಾಂಗ್ರೆಸ್‌ ಯೋಜಿತ ರೀತಿಯಲ್ಲಿ ಗಲಭೆಗಳನ್ನು ಆಯೋಜಿಸಿದೆ ಎಂದು ಆರೋಪಿಸಿದರು.

ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್‌ಗೆ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕೆ ಏನಿದ್ದರೂ ತುಷ್ಟೀಕರಣ ನೀತಿ ಮಾತ್ರ ಗೊತ್ತು ಎಂದರು.

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಅಮಿತ್‌ ಶಾ ಪ್ರವಾಸ ಮಹತ್ವ ಪಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next