Advertisement
ಪ್ರಸಿದ್ಧ ಜಾಮಿಯಾ ಮಸೀದಿ, ವಿಶ್ರಾಂತಿ ಚರ್ಚ್ ಇದೇ ವಾರ್ಡ್ನಲ್ಲಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಈ ವಾರ್ಡ್ಗೆ ಹೊಂದಿಕೊಂಡಿದೆ. ವಾರ್ಡ್ನ ಮುಖ್ಯ ರಸ್ತೆಗಳು ಇಕ್ಕಟ್ಟಾಗಿದ್ದು, ವಿಸ್ತರಣೆಗೊಳ್ಳಬೇಕಿದೆ. ಕೆಲವು ಕಡೆಗಳಲ್ಲಿ ಫುಟ್ಪಾತ್ ಕಾಮ ಗಾರಿ ನಡೆಯಬೇಕಿದೆ. ಇನ್ನೂ, ವಾರ್ಡ್ನಲ್ಲಿರುವ ಬಂದರು ಇಲಾಖೆ ಅಧೀನದ ಜಾಗದಲ್ಲಿ ಪಾರ್ಕ್ ಮಾಡಲಾಗಿದ್ದು, ಮಕ್ಕಳ ಆಟವಾಡುತ್ತಿದ್ದಾರೆ. ಜೋರಾಗಿ ಮಳೆ ಸುರಿದರೆ ನಾರಾಯಣಗುರು ಕಾಲೇಜು ಬಳಿ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿ ಯಾಗಿ ವಾಹನಸವಾರರಿಗೆ ಮತ್ತು ಸಾರ್ವ ಜನಿಕರಿಗೆ ತೊಂದರೆ ಉಂಟಾಗುತ್ತಿದೆ.
Related Articles
ಕುದ್ರೋಳಿ ವಾರ್ಡ್ನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆದರೂ ಮುಂದಿನ ದಿನಗಳಲ್ಲಿ ಕೆಲವೊಂದು ಮೂಲ ಸೌಕರ್ಯಗಳಿಗೆ ಮತ್ತಷ್ಟು ಒತ್ತು ನೀಡಬೇಕಿದೆ. ಕೆಲವೊಂದು ಒಳರಸ್ತೆಗಳು ಕಾಂಕ್ರಿಟೀಕರಣಗೊಳ್ಳಬೇಕು. ರಸ್ತೆಗಳಿಗೆ ಇಂಟರ್ಲಾಕ್ ಕೆಲಸಗಳು ನಡೆಯಬೇಕು. ಕೆಲವೊಂದು ಕಡೆಗಳಲ್ಲಿ ಕುಡಿಯುವ ನೀರಿನ ನಳ್ಳಿ ವ್ಯವಸ್ಥೆ ಆಗಬೇಕು. ಒಳಚರಂಡಿ ದುರಸ್ತಿಗೊಳಿಸಬೇಕು. ರಸ್ತೆ ಬದಿಯಲ್ಲಿ ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.
Advertisement
ಪ್ರಮುಖ ಕಾಮಗಾರಿ-ಜಾಮಿಯಾ ಮಸೀದಿಯಿಂದ ಮ್ಯಾಟ್ರಿಕ್ಸ್ ಶೋರೂಂ ವರೆಗೆ ಒಳಚರಂಡಿ ವ್ಯವಸ್ಥೆ ಮತ್ತು ನಳ್ಳಿ ನೀರು ವ್ಯವಸ್ಥೆ
-ಸಿಪಿಸಿ ಕಾಂಪೌಂಡ್ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ
-ಉರ್ದುಶಾಲೆಯಿಂದ ವಧಾಗೃಹವರೆಗಿನ ಒಳಚರಂಡಿ ವ್ಯವಸ್ಥೆ
-ಜಾಮಿಯಾ ಮಸೀದಿಯಿಂದ ಮ್ಯಾಟ್ರಿಕ್ಸ್ ಶೋರೂಂವರೆಗೆ ರಸ್ತೆ ಕಾಂಕ್ರಿಟೀಕರಣ
-ನಾರಾಯಣಗುರು ಶಾಲೆಯಿಂದ ಬರ್ಕೆ ಶಾಲೆವರೆಗೆ ರಸ್ತೆ ಕಾಂಕ್ರಿಟೀಕರಣ
-ವಿಶ್ರಾಂತಿ ಚರ್ಚ್ ಎದುರಿನ ರಸ್ತೆ, ಕರ್ನಲ್ ಗಾರ್ಡನ್, ರೆಹಮತ್ನಗರವರೆಗೆ ರಸ್ತೆ ಕಾಂಕ್ರಿಟೀಕರಣ
-ಟಿಪ್ಪು ಸುಲ್ತಾನ್ ನಗರದ ನೀರು ಹರಿಯುವ ತೋಡಿನ ಕಾಮಗಾರಿ ಕುದ್ರೋಳಿ ವಾರ್ಡ್
ಭೌಗೋಳಿಕ ವ್ಯಾಪ್ತಿ: ಕುದ್ರೋಳಿ ಮಠದಕಣಿಯಿಂದ ಕುಂಡತ್ತಪಳ್ಳಿಯ ಒಂದು ಭಾಗ, ಮ್ಯಾಟ್ರಿಕ್ಸ್ ಶೋರೂಂನಿಂದ ಜಾಮಿಯಾ ಮಸೀದಿ, ಬರ್ಕೆ ಬ್ರಿಡ್ಜ್ನಿಂದ ವಿಶ್ರಾಂತಿ ಚರ್ಚ್ ವರೆಗೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು
ನನ್ನ ಅಧಿಕಾರದ ಅವಧಿಯಲ್ಲಿ ವಾರ್ಡ್ನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಮುಂಬರುವ ದಿನಗಳಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಬೇಕು.
– ಅಬ್ದುಲ್ ಅಜೀಜ್ - ನವೀನ್ ಭಟ್ ಇಳಂತಿಲ