Advertisement

ಬೆಳಗ್ಗಿನ ಆಜಾನ್‌ಗೆ ಮೈಕ್‌ ಬಳಸೆವು; ಮುಸ್ಲಿಂ ಧಾರ್ಮಿಕ, ರಾಜಕೀಯ ಮುಖಂಡರ ಸಭೆಯಲ್ಲಿ ತೀರ್ಮಾನ

01:35 AM May 15, 2022 | Team Udayavani |

ಬೆಂಗಳೂರು: ಶಬ್ದಮಾಲಿನ್ಯಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಹಾಗೂ ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸದಿರಲು ನಿರ್ಧರಿಸಿರುವ ಮುಸ್ಲಿಂ ಸಮುದಾಯ, ಮುಂಜಾನೆಯ ಪ್ರಾರ್ಥನೆ (ಫ‌ಜರ್‌ ನಮಾಜ್‌)ಗೆ ಮೈಕ್‌ ಇಲ್ಲದೆ ಆಜಾನ್‌ ನೀಡಲು ತೀರ್ಮಾನಿಸಿದೆ.

Advertisement

ಕರ್ನಾಟಕದ ಅಮಿರೆ ಷರಿಯತ್‌ ಮೌಲಾನ ಸಗೀರ್‌ ಅಹ್ಮದ್‌ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ದಾರುಲ್‌ ಉಲೂಮ್‌ ಸಬೀಲುರ್ರಷಾದ್‌ನಲ್ಲಿಜರಗಿದ ಮುಸ್ಲಿಂ ಧಾರ್ಮಿಕ ಹಾಗೂ ಇತರ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಬೆಳಗ್ಗಿನ ಆಜಾನ್‌ಗೆ ಮೈಕ್‌ ಬಳಸದಂತೆ ರಾಜ್ಯದ ಎಲ್ಲ ಮಸೀದಿಗಳಿಗೆ ಅಮಿರೆ ಷರಿಯತ್‌ ಮನವಿ ಮಾಡಿದ್ದಾರೆ.

ಅಗತ್ಯ ಅನುಮತಿ ಪಡೆದುಕೊಳ್ಳಿ
ಅನುಮತಿಸಿದ ಅವಧಿಗಳಲ್ಲಿ ಶಬ್ದ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಧ್ವನಿವರ್ಧಕಗಳ ಶಬ್ದ ನಿಯಂತ್ರಿಸುವ ಉಪಕರಣ ಅಳವಡಿಸಿಕೊಳ್ಳುವಂತೆ ಎಲ್ಲ ಮಸೀದಿಗಳ ವ್ಯವಸ್ಥಾಪನ ಸಮಿತಿಗಳಿಗೆ ಸಗೀರ್‌ ಅಹ್ಮದ್‌ ಮನವಿ ಮಾಡಿಕೊಂಡಿದ್ದಾರೆ.

ಮೌಲಾನ ಮಕ್ಸೂದ್‌ ಇಮ್ರಾನ್‌ ರಷಾದಿ, ಮೌಲಾನ ಇಫೆಖಾರ್‌ ಖಾಸ್ಮಿ, ವಿಪಕ್ಷ ಉಪ ನಾಯಕ ಯು.ಟಿ. ಖಾದರ್‌, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ, ಮಾಜಿ ಸಚಿವ ಜಮೀರ್‌ ಅಹ್ಮದ್‌, ಶಾಸಕರಾದ ನಸೀರ್‌ ಅಹ್ಮದ್‌, ಎನ್‌.ಎ. ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌, ರಹೀಂ ಖಾನ್‌, ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಜಬ್ಟಾರ್‌, ವಕೀಲ ರಾದ ಅಕ್ಮಲ್‌ ರಿಜ್ವಿ, ಅಬ್ದುಲ್‌ ರಿಯಾಜ್‌ ಖಾನ್‌ ಮತ್ತಿತರರು ಸಭೆಯಲ್ಲಿದ್ದರು.

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next