Advertisement

ಸಿಎಎ ಜಾರಿ ಕೇಂದ್ರ ಸರ್ಕಾರದ ನಿರ್ಧಾರ: ಸಿಎಂ ನಿತೀಶ್‌ ಕುಮಾರ್‌

08:05 PM May 06, 2022 | Team Udayavani |

ಪಾಟ್ನಾ:ಕೇಂದ್ರ ಸರ್ಕಾರವೇ ಸಿಎಎ ಜಾರಿ ಮಾಡುವುದನ್ನು ನಿರ್ಧರಿಸುತ್ತದೆ. ಸದ್ಯ ದೇಶದಲ್ಲಿ ಕೊರೊನಾ ಸಂಖ್ಯೆ ಏರುತ್ತಿದೆ. ರಾಜ್ಯ ಸರ್ಕಾರ ಜನರನ್ನು ರಕ್ಷಿಸುವ ಕೆಲಸ ಮಾಡುವತ್ತ ಯೋಚಿಸುತ್ತಿದೆ ಎಂದಿದ್ದಾರೆ ಬಿಹಾರ ಸಿಎಂ ನಿತೀಶ್‌ ಕುಮಾರ್‌.

Advertisement

ಗುರುವಾರ ಬಂಗಾಳದ ಸಿಲಿಗುರಿಯಲ್ಲಿ ನಡೆದಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಅಮಿತ್‌ ಶಾ, ಕೊರೊನಾ ಮುಗಿದ ಕೂಡಲೇ ದೇಶದಲ್ಲಿ ಸಿಎಎ ಜಾರಿ ಮಾಡಲಾಗುವುದು ಎಂದಿದ್ದರು.

ಇದೇ ವೇಳೆ, ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್‌ ಕಿಶೋರ್‌ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದಾರೆ.

“ಬಿಹಾರದಲ್ಲಿ ನಾವೇನು ಒಳ್ಳೆಯದು ಮಾಡಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next