Advertisement

ಆರ್‌ಟಿಇ ಕಾಯ್ದೆ ಉಲ್ಲಂಘನೆ ಬಗ್ಗೆ ದೂರು

02:31 PM May 29, 2018 | Team Udayavani |

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದೂರುಗಳು ದಾಖಲಾಗುತ್ತಿವೆ.

Advertisement

ಆರ್‌ಟಿಇ ಸಂಬಂಧಿಸಿದ ಎರಡರಿಂದ ಮೂರು ದೂರುಗಳು ಪ್ರತಿ ದಿನ ಆಯೋಗದಲ್ಲಿ ದಾಖಲಾಗುತ್ತಿದ್ದು, ಮೊದಲ ಸುತ್ತಿನಲ್ಲಿ ಸೀಟು ಪಡೆದ ಮಕ್ಕಳನ್ನು ಸೇರಿಸಿಕೊಳ್ಳದಿರುವುದು ಹಾಗೂ ಕೆಲವೊಂದು ಶಾಲೆಗಳು ಒಂದೇ ಒಂದು ಮಗುವನ್ನು ದಾಖಲಿಸಿಕೊಳ್ಳದ ಬಗ್ಗೆ ಅನೇಕ ದೂರುಗಳು ಬಂದಿವೆ.

ನಗರದ ಪ್ರತಿಷ್ಠಿತ ಶಾಲೆಯೊಂದು ಎಂಟು ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಹಂಚಿಕೆಯಾದ ಸೀಟು ನಿರಾಕರಿಸಿದೆ. ಈ ಸಂಬಂಧ ಮೂವರು ಮಕ್ಕಳ ಪೋಷಕರು ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗದಿಂದ ದೂರಿನ ವಿಚಾರಣೆ ನಡೆಸಿ, ಶಾಲೆ ಮಾನ್ಯತೆ ರದ್ದು ಮಾಡುವ ಕುರಿತು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು, ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧ್ಯಕ್ಷರ ಜತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಶಾಲಾ ಶುಲ್ಕವನ್ನು ನಗದು ಮೂಲಕ ನೀಡಲು ಒಪ್ಪದ ಪಾಲಕರ ಮಗುವಿಗೆ ವರ್ಗಾವಣೆ ಪತ್ರ ನೀಡಲು ಶಾಲೆಯೊಂದು ಮುಂದಾಗಿತ್ತು. ಈ ಸಂಬಂಧ  ನೀಡಿದ ದೂರಿನಂತೆ ವಿಚಾರಣೆ ನಡೆಸಿ, ಇತ್ಯರ್ಥಪಡಿಸಿದ್ದೇವೆ. ಇಂತಹ ಅನೇಕ ದೂರುಗಳು ಆಯೋಗಕ್ಕೆ ಬಂದಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್‌ ಆಳ್ವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next