Advertisement

ಸಿಎಂ ಪುತ್ರ ಯತೀಂದ್ರ ವಿರುದ್ಧ ಐಟಿಗೆ ದೂರು;ಏನಿದು ಬೇನಾಮಿ ಹಣ ಹೂಡಿಕೆ

05:52 PM May 08, 2017 | Team Udayavani |

ಬೆಂಗಳೂರು: ಬೇನಾಮಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಆದಾಯ ತೆರಿಗೆ ತನಿಖೆ ವಿಭಾಗದಲ್ಲಿ ದೂರು ದಾಖಲಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಬೇನಾಮಿ ಆಸ್ತಿ ವರ್ಗಾವಣೆ, ಹಣ ಹೂಡಿಕೆ ಮಾಡಿರುವುದಾಗಿ ಆರೋಪಿಸಿ ವರ್ತೂರು ಕನಕದಾಸ್ ಎಂಬವರು ಐಟಿ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ.

ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಶನ್ಸ್ ನಲ್ಲಿ ಡಾ.ಯತೀಂದ್ರ ಅವರು ಬೇನಾಮಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹಾಗಾಗಿ ಬೇನಾಮಿ ಸ್ವತ್ತು ಅಧಿನಿಯಮ 1988ರ ಅಡಿ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಈಗಾಗಲೇ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಶನ್ಸ್ ಇಂಡಿಯಾ ಪ್ರೈ ಲಿ. ಗೆ ಸಂಬಂಧಿಸಿದ ಟೆಂಡರ್ ಗೆ ಸಂಬಂಧಿಸಿಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next