Advertisement

ವರುಣಾಕ್ಕೆ ಬಂದು ಸ್ಪರ್ಧಿಸಿ; ಡಿವಿಎಸ್‌ಗೆ ಸಿದ್ದರಾಮಯ್ಯ ಸವಾಲು!

12:23 PM Dec 10, 2017 | |

ಬೆಂಗಳೂರು:‘ವರುಣಾ ಕ್ಷೇತ್ರಕ್ಕೆ ಸದಾನಂದ ಗೌಡರೇ  ಬಂದು ಸ್ಪರ್ಧಿಸಲಿ , ಬೆರೆಯವರನ್ನು ನಿಲ್ಲಿಸಿ ಬಲಿ ಕೊಡುವುದು ಬೇಡ’ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಸವಾಲೆಸೆದಿದ್ದಾರೆ. 

Advertisement

‘ನಾನು ಕ್ಷೇತ್ರಕ್ಕೆ ತೆರಳಿದ ಬಳಿಕ ಸಿದ್ದರಾಮಯ್ಯ ಅವರಿಗೆ ನಡುಕ ಶುಕರುವಾಗಿದೆ’ ಎಂದಿದ್ದ ಸದಾನಂದ ಗೌಡರ ಹೇಳಿಕೆಗೆ ಸಿದ್ದರಾಮಯ್ಯ  ಭಾನುವಾರ ಈ ಪ್ರತಿಕ್ರಿಯೆ ನೀಡಿದ್ದಾರೆ. 

‘ಸದಾನಂದ ಗೌಡರಿಗೆ ವರುಣಾ ಕ್ಷೇತ್ರವೇ ಗೊತ್ತಿಲ್ಲ. ಸುಮ್ಮನೆ ಏನೇನೋ ಮಾತನಾಡುತ್ತಿದ್ದಾರೆ. ಅಲ್ಲಿ ಈ ಬಾರಿ ನಾನು ಸ್ಪರ್ಧಿಸುತ್ತಿಲ್ಲ. ನನ್ನ ಮಗ ಸ್ಪರ್ಧಿಸುತ್ತಿದ್ದಾನೆ. ಸದಾನಂದ ಗೌಡರು ಅಲ್ಲಿಂದಲೇ ಸ್ಪರ್ಧಿಸಲಿ. ಕಳೆದ ಬಾರಿ  ನಾನು 32 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಅಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೆ?ಅಷ್ಟು ಸುಲಭವೆ?’ ಎಂದು ಪ್ರಶ್ನಿಸಿದರು.

‘ನಾನು ಯಾರಿಗೂ ಭಯಪಡುವುದಿಲ್ಲ. ಸದಾನಂದ ಗೌಡರಿಗೆ ಕ್ಷೇತ್ರದ ಉಸ್ತುವಾರಿ  ನೀಡಿದ ಕೂಡಲೆ ಜನ ಬದಲಾಗುತ್ತಾರಾ? ಭಾಷಣ ಬಿಗಿಯುವ ಬದಲು  ಸದಾನಂದ ಗೌಡರೇ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next