Advertisement

ವರಿಷ್ಠರ ನಿರ್ಧಾರಕ್ಕೆ ಬದ್ಧ: ಎಸ್‌ಆರ್‌ಪಿ 

06:00 AM Jun 09, 2018 | Team Udayavani |

ಬಾಗಲಕೋಟೆ: ನಾನೊಬ್ಬ ಹಿರಿಯನಾದರೂ ನನಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದು ಪಕ್ಷದ ವರಿಷ್ಠರ ನಿರ್ಧಾರ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಹೇಳಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಬೇಕು ಎಂದು ಹಲವಾರು ಅಭಿಮಾನಿಗಳು ಕೇಳಿದ್ದರು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರೆಲ್ಲ ಬೇಸರಗೊಂಡು ಬೆಂಗಳೂರಿಗೆ ಬಂದಿದ್ದರು. ಹೀಗಾಗಿ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸಲು ಬೆಂಗಳೂರಿಗೆ ಹೋಗಿದ್ದೆ.ನನಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಯಾರೂ ಪಕ್ಷದ ವಿರುದಟಛಿ ಕೆಲಸ ಮಾಡಬಾರದು ಎಂದರು.

ಕಾಂಗ್ರೆಸ್‌ ಪಕ್ಷ ಇಂತಹ ಸನ್ನಿವೇಶಗಳನ್ನು ಸುಲಭವಾಗಿ ಪರಿಹರಿಸ ಬಹುದಿತ್ತು. ಕೆಲವು ಹೆಜ್ಜೆ ಇಡುವಾಗ ಎಡವಿರುವುದರಿಂದ ಈ ಸನ್ನಿವೇಶ ಉಂಟಾಗಿದೆ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಇದರಿಂದ ಹಿಂದೆ
ಸರಿಯುವುದಿಲ್ಲ. ಈ ಸಂದರ್ಭದಲ್ಲಿ ಯಾವ ರೀತಿ ನಡೆಯಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ.

– ತನ್ವೀರ್ ಸೇಠ್, ಅತೃಪ್ತ ಶಾಸಕ

ಹಲವು ಶಾಸಕರು ಸೇರಿ ಪಕ್ಷಕ್ಕೆ ಧಕ್ಕೆಯಾಗದ ರೀತಿ ಮುಂದಿನ ಹೆಜ್ಜೆ ಹೇಗಿರಬೇಕು ಎಂದು ಚರ್ಚಿಸಿದ್ದೇವೆ. ನಮ್ಮ ಶಾಸಕರು ಪ್ರಬಲವಾಗಿದ್ದಾರೆ. ಹೈಕಮಾಂಡ್‌ ಬಗ್ಗೆ ನಾವು ಏನೂ ಹೇಳುವುದಿಲ್ಲ. ನಮ್ಮ ಮುಂದಿನ ನಡೆಯ ಬಗ್ಗೆ
ಮಾತ್ರ ಚರ್ಚೆ ನಡೆಸಿದ್ದೇವೆ.

–  ಎಚ್‌.ಕೆ. ಪಾಟೀಲ್‌,
ಸಚಿವ ಸ್ಥಾನ ವಂಚಿತ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next