ನಂಜನಗೂಡು: ನಗರದ 19ನೇ ವಾರ್ಡ್ ನೀಲಕಂಠನಗರ ಬಡಾವಣೆಗೆ ಅತೀ ಶಿಘ್ರದಲ್ಲಿ ಮೂಲ ಸೌಲಭ್ಯ ಒದಗಿಸಲು ಬದ್ಧನಾಗಿರುವುದಾಗಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ನೀಲಕಂಠನಗರ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿದ ಶಾಸಕರು, ಬಡಾವಣೆಗೆ ಅಗತು ಮೂಲ ಸೌಲಭ್ಯಗಳನ್ನು ಕೂಡಲೇ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಿಗೆ ಬಡಾವಣೆಗಳಲ್ಲಿ ಸೌಲಭ್ಯ ಕೊರತೆ ಪಟ್ಟಿ ನೀಡಿದ ನಾಗರಿಕರು, ಇಲ್ಲಿ ಕೈಗೊಂಡಿದ್ದ ರಸ್ತೆ, ಚರಂಡಿ, ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಮುಂದೆ ಆ ರೀತಿ ಆಗಲು ಬಿಡುವುದಿಲ್ಲ.
ಕ್ಷೇತ್ರದ ಎಲ್ಲಾ ಗ್ರಾಮ, ವಾರ್ಡ್, ಬಡಾವಣೆಗಳಲ್ಲಿಯೂ ಪಾದಯಾತ್ರೆ ಮಾಡಿ ಮೂಲ ಸೌಲಭ್ಯಗಳ ಪರಿಶೀಲನೆ ಮಾಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಅಧ್ಯಕ್ಷ ಬಾಲಚಂದ್ರ, ತಾಪಂ ಅಧ್ಯಕ್ಷ ಬಿ.ಮಹದೇವಪ್ಪ, ಇತರರಿದ್ದರು.