Advertisement

ಎರಡು ಲಾರಿಗಳ ನಡುವೆ ಢಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

09:45 AM Mar 11, 2022 | Team Udayavani |

ಕುಳಗೇರಿ ಕ್ರಾಸ್: ಎರಡು ಲಾರಿಗಳ ನಡುವೆ ಢಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಗ್ರಾಮದ ಬಳಿ ನಡೆದಿದೆ.

Advertisement

ಬಾಗಲಕೋಟೆ ಕಡೆಯಿಂದ ಬರುತ್ತಿದ್ದ ನೇಪಾಳ ಲಾರಿಗೂ ಹಾಗೂ ನಿರಾಣಿ ಸಕ್ಕರೆ ಕಾರ್ಖಾನೆ ಕಡೆಯಿಂದ ಹೆದ್ದಾರಿಗೆ ಬಂದು ಸೇರುವ ಮಿನಿ ಲಾರಿಗೂ ಮುಖಾಮುಖಿ ಢಿಕ್ಕಿಯಾಗಿದೆ. ಮಿನಿ ಲಾರಿಯಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಗೋವಾ ಬಿಜೆಪಿಗೆ ‘ಎಂಜಿಪಿ’ ಬಲ: 25 ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ನಿರ್ಧಾರ

ಸ್ಥಳಕ್ಕೆ ಕೆರೂರ ಹಾಗೂ ಕುಳಗೇರಿ ಕ್ರಾಸ್ ಪೊಲೀಸ್ ಠಾಣಾ ಸಿಬ್ಬಂದಿ ಸೇರಿದಂತೆ ಬಾದಾಮಿ ಸಿಪಿಐ ರಮೇಶ್ ಹಾನಾಪೂರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next