Advertisement

ಕಂಟೈನರ್- ಬಸ್ ಮುಖಾಮುಖಿ: ಹೊತ್ತಿ ಉರಿದ ಬಸ್, ಕಂಟೈನರ್ ಚಾಲಕ ಸಜೀವ ದಹನ

08:56 AM Mar 25, 2021 | Team Udayavani |

ಉಪ್ಪಿನಂಗಡಿ: ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಢಿಕ್ಕಿಯಾಗಿ ಕಂಟೈನರ್ ಚಾಲಕ ಸಜೀವ ದಹನವಾದ ಘಟನೆ ಕಡಬ ತಾಲೂಕಿನ ಮಣ್ಣಗುಂಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ನೆಲ್ಯಾಡಿಯ ಕಲ್ಕುಲಾಡಿ ಗ್ರಾಮದ ಪೆರಿಯಶಾಂತಿ ಬಳಿ ಮಧ್ಯರಾತ್ರಿ 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಮೃತಪಟ್ಟ ಕಂಟೈನರ್ ಚಾಲಕನನ್ನು ಮೈಸೂರು ಮೂಲದ ಸಂತೋಷ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:07ತೆಂಗಿನ ಕಾಯಿಗೆ ದಾಖಲೆ ಬೆಲೆ : ಫ‌ಸಲು ಕೊರತೆ-ತೆಂಗಿನ ಎಣ್ಣೆಗೂ ಹೆಚ್ಚಿದ ಬೇಡಿಕೆ

ಖಾಸಗಿ ಬಸ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಹಾಸನದಿಂದ ಮಂಗಳೂರಿಗೆ ಬರುತ್ತಿದ್ದ ತರಕಾರಿ ತುಂಬಿದ್ದ ಕಂಟೈನರ್ ಗೆ ಢಿಕ್ಕಿಯಾಗಿದೆ. ಅಪಘಾತದ ಪರಿಣಾಮ ಕೂಡಲೇ ಎರಡೂ ವಾಹನಗಳಿಗೆ ಬೆಂಕಿ ಹತ್ತಿಕೊಂಡಿದೆ.

Advertisement

ಇದನ್ನೂ ಓದಿ: ಹೇಳಿದ್ದು 66 ಕಿ.ಮೀ.; ಗುತ್ತಿಗೆ 48 ಕಿ.ಮೀ.ಗೆ ಉಳಿದದ್ದು ಯಾವಾಗ ?

ಕಂಟೈನರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೆಂಕಿ ಹತ್ತಿಕೊಂಡಿದೆ, ಪರಿಣಾಮ ವಾಹನದಿಂದ ಹೊರ ಬರಲಾಗದ ಚಾಲಕ ಸಜೀವ ದಹನವಾಗಿದ್ದಾನೆ.

ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಪ್ರಯಾಣಿಕರು ಕೂಡಲೇ ಬಸ್ ನಿಂದ ಇಳಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಇದನ್ನೂ ಓದಿ: ಬೆಳ್ತಂಗಡಿ: ಪ.ಪಂ. ಚರಂಡಿ ವಾಸನೆ ಸಹಿಸಲು ಬೇಕಿದೆ ಮಾಸ್ಕ್!

ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರಾದರೂ, ಅವರು ಸ್ಥಳಕ್ಕೆ ಬರುವ ಮೊದಲೇ ಬಸ್ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು, ಸ್ಥಳೀಯರ ನೆರವಿನಿಂದ ಹತ್ತಿರದ ಮನೆಯಿಂದ ನೀರು ತಂದು ಬೆಂಕಿ ನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next