Advertisement

ಕಾರು ಗುದ್ದಿ ಏಳು ಎಮ್ಮೆ ಸಾವು

01:14 PM May 17, 2022 | Niyatha Bhat |

ಶಿವಮೊಗ್ಗ: ಕಾರೊಂದು ಗುದ್ದಿದ ಪರಿಣಾಮ 7 ಎಮ್ಮೆಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಗರದ ಸಾಗರ ರಸ್ತೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಾರೊಂದು ಶಿವಮೊಗ್ಗದಿಂದ ಆಯನೂರಿನ ಕಡೆ ಹೋಗುತ್ತಿದ್ದಾಗ ಗಾಡಿಕೊಪ್ಪದ ತುಂಗಾ ಚಾನಲ್‌ ಹತ್ತಿರ ಎಮ್ಮೆಗಳಿಗೆ ಡಿಕ್ಕಿಯಾಗಿದೆ.

Advertisement

ಪರಿಣಾಮ ಸ್ಥಳದಲ್ಲೇ ಎಮ್ಮೆಗಳು ಮೃತಪಟ್ಟಿವೆ. ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್‌ ಪಾರಾಗಿದ್ದಾರೆ. ಅಪಘಾತವಾದ ಕೂಡಲೇ ಕಾರಿನ ಚಾಲಕ ಮತ್ತಿತರರು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಮೃತಪಟ್ಟ ಎಮ್ಮೆಗಳನ್ನು ರಸ್ತೆಯಿಂದ ಎಳೆದು ಪಕ್ಕಕ್ಕೆ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ರಸ್ತೆ ಮಧ್ಯದಲ್ಲಿ ಎಮ್ಮೆಗಳ ಗುಂಪು ಇರುವುದನ್ನು ಗಮನಿಸದೆ ಕಾರು ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಕೆ.ಎಸ್. ಈಶ್ವರಪ್ಪ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next