Advertisement

ಮಳೆಯ ಅಬ್ಬರಕ್ಕೆ ಅತಂತ್ರಗೊಅಡ ಕಾಫಿ ಬೆಳೆಗಾರ

06:28 PM Oct 17, 2021 | Team Udayavani |

ಕೊಟ್ಟಿಗೆಹಾರ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

Advertisement

ಬಣಕಲ್, ಕೊಟ್ಟಿಗೆಹಾರ, ಫಲ್ಗುಣಿ, ಹೊರಟ್ಟಿ, ಬಾಳೂರು, ತರುವೆ, ಅತ್ತಿಗೆರೆ, ಬಿನ್ನಡಿ,ತ್ರಿಪುರ, ಗುತ್ತಿ ಸೇರಿದಂತೆ ವಿವಿದೆಡೆ ಧಾರಾಕಾರ ಮಳೆಯಾಗಿದ್ದು  ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಗಿಡದಲ್ಲಿ ಹಣ್ಣಾಗಿ ನಿಂತ ಕಾಫಿಯನ್ನು ಕುಯ್ಲು ಮಾಡಲು ಸಾಧ್ಯವಾಗದಂತಾಗಿದೆ.

ಈಗಾಗಲೇ ಕುಯ್ಲು ಮಾಡಿದ ಕಾಫಿಯನ್ನು ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗದೇ ಕಣದಲ್ಲಿ ರಾಶಿ ಮಾಡಿದ ಕಾಫಿ ಕೊಳೆಯತೊಡಗಿದೆ. ಗಿಡದಲ್ಲಿ ಹಣ್ಣಾದ ಕಾಫಿಯನ್ನು ಕುಯ್ಯದೇ ಬಿಟ್ಟರೇ ಕಾಫಿ ಉದುರತೊಡಗುತ್ತದೆೆ. ಕಾಫಿ ಕುಯ್ಲು ಮಾಡಿದರೆ ಒಣಗಿಸಲಾಗದೇ ಕಾಫಿ ಕೊಳೆಯತೊಡಗುತ್ತದೆ. ಮಳೆಯಿಂದಾಗಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾಫಿ ಬೆಳೆಗಾರ ರಘು ಹೊರಟ್ಟಿ ಅವರು, ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ವರ್ಷ ಪೂರ್ತಿ ದುಡಿದ ಫಸಲು ಕೈ ಸೇರುವ ವೇಳೆಗೆ ಮರಿ ಸುರಿದು ಕಾಫಿ ಕೊಳೆಯತೊಡಗುತ್ತಿದೆ. ಕಾಫಿ ಬೆಳೆಗಾರರ ಬದುಕು ಕೂಡ ಕೊಳೆಯತೊಡಗಿದೆ. ಈ ಬಗ್ಗೆ ಸಂಬಅಧಪಟ್ಟ ಜನಪ್ರತಿನಿಧಿಗಳು ಬೆಳೆ ಪರಿಹಾರ ನೀಡಲು ಮುಂದಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next