Advertisement

ಮಾತು ತಪ್ಪುತ್ತಿರುವ ಸಿಎಂ ಯಡಿಯೂರಪ್ಪ

11:26 PM Jan 31, 2020 | Lakshmi GovindaRaj |

ಶ್ರೀರಂಗಪಟ್ಟಣ: ಬಿಜೆಪಿ ನಂಬಿ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಚಿವ ಸ್ಥಾನ ಕೊಡದಿದ್ದರೆ ಮಾತು ತಪ್ಪಿದ ಅಪಕೀರ್ತಿಗೆ ಪಾತ್ರರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಗೆ ಬಂದರೆ ಎಲ್ಲರನ್ನೂ ಸಚಿವರನ್ನಾಗಿ ಮಾಡುತ್ತೇವೆಂದು ವಾಗ್ಧಾನ ಮಾಡಿ, 17 ಮಂದಿ ಯಿಂದ ಶಾಸಕ ಸ್ಥಾನಕ್ಕೆ ರಾಜೀ ನಾಮೆ ಕೊಡಿಸಿ, ಕುಮಾರಸ್ವಾಮಿ ಸರ್ಕಾರಕ್ಕೆ ಧಕ್ಕೆ ತಂದು, ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬಳಿಕ, 14 ಮಂದಿ ಚುನಾವಣೆಗೆ ನಿಂತಿ ದ್ದು, 12 ಮಂದಿ ಗೆದ್ದಿದ್ದಾರೆ.

ಅವರಿಗೆ ಈಗ ಸಚಿವ ಸ್ಥಾನ ನೀಡಲು ಹಿಂದೇಟು ಹಾಕಿರುವ ಬಿಜೆಪಿ ಸರ್ಕಾರ, 9 ಮಂದಿ, 6 ಮಂದಿ ಎಂದು ಎಣಿಕೆ ಮಾಡಿ ಮಾತು ತಪ್ಪುತ್ತಿದೆ. ಸಚಿವ ಸ್ಥಾನ ಇದ್ದರೂ ರಾಜೀನಾಮೆ ನೀಡಿದ ಎಂಟಿಬಿ ನಾಗರಾಜು ಹಾಗೂ ಹಿರಿಯ ರಾಜಕಾರಣಿ ಜೆಡಿಎಸ್‌ನ ಮಾಜಿ ರಾಜ್ಯಾ ಧ್ಯಕ್ಷ ವಿಶ್ವನಾಥ್‌ ಅವರನ್ನು ಗಣನೆಗೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಯಡಿಯೂರಪ್ಪ ಅವರು ಬಿಜೆಪಿಗೆ ಸೇರಿದ ಕೂಡಲೇ ಇವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕಿತ್ತು.

ಆದರೆ, ಇನ್ನೂ ಇವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ನೋಡಿದರೆ ಮಾತು ತಪ್ಪಿದ ಯಡಿಯೂರಪ್ಪ ಆಗಬೇಕಾಗು ತ್ತದೆ ಎಂದು ಟೀಕಿಸಿದರು. ಕೆ.ಆರ್‌.ಪೇಟೆಯ ನಾರಾಯಣ ಗೌಡರಿಗೆ ಸಚಿವ ಸ್ಥಾನ ನೀಡಿ, ಮಂಡ್ಯ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂದು ಬಿಎಸ್‌ವೈಯವರನ್ನು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next