Advertisement

ರಬಕವಿ-ಬನಹಟ್ಟಿ: ಜನರು ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ವಿಶ್ವಾಸದಲ್ಲಿದ್ದಾರೆ: ಬೊಮ್ಮಾಯಿ

12:56 PM Feb 26, 2023 | Team Udayavani |

ರಬಕವಿ- ಬನಹಟ್ಟಿ: ಅಭಿವೃದ್ಧಿ ಪರ್ವ ಎಲ್ಲೆಡೆಯಿದೆ. ಕೃಷಿ, ನೀರಾವರಿ, ಸಾಮಾಜಿಕ ಸೇರಿದಂತೆ ಎಲ್ಲ ವರ್ಗದ ಜನತೆಯ ಅಭಿವೃದ್ಧಿಯಾಗಿ ಜನರು ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ವಿಶ್ವಾಸದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಗೆ ಆಗಮಿಸುತ್ತಿದ್ದಂತೆ ಹೆಲಿಪ್ಯಾಡ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಪಕ್ಷವಾದ ಕಾಂಗ್ರೆಸ್ ಆಧಾರ ರಹಿತ ಆರೋಪಗಳಿಗೆ ಉತ್ತರ ಕೊಡಲ್ಲ. ಬಿಜೆಪಿಗೆ ಜನತೆಯ ಆಶೀರ್ವಾದವಿದೆ ಎಂದರು.

ಆಡಳಿತಕ್ಕೆ ಬಾರದ ಕಾಂಗ್ರೆಸ್ ಪಕ್ಷದಿಂದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತೇನೆಂದು ನಡೆಸುತ್ತಿರುವ ಪೈಪೋಟಿ ವಿನಾಕಾರಣವೆಂದು ಬೊಮ್ಮಾಯಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪ್ರತಿ ಸಲ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಶಾ ರಾಜ್ಯಕ್ಕೆ ಬರುವಾಗ ಸಾವಿರಾರು ಕೋಟಿ ರೂ.ಗಳ ಅನುದಾನಗಳನ್ನು ಹೊತ್ತು ತಂದಿದ್ದಾರೆಯೇ ವಿನಃ ಖಾಲಿ ಕೈಗಳಿಂದ ಭಾಷಣ ಮಾಡಿಲ್ಲವೆಂದು ಬೊಮ್ಮಾಯಿ ಪ್ರತಿ ಪಕ್ಷಗಳ ವಾದಕ್ಕೆ ಪ್ರತಿವಾದಿಸಿದರು.

ಬಾಗಲಕೋಟೆ ಜಿಲ್ಲೆಗೆ ಮುಂದಿನ ವಾರ ಮತ್ತೇ ಬರುವೆ, ಮುಧೋಳ, ಹುನಗುಂದ, ಬಾಗಲಕೋಟೆ ಸೇರಿ ಅನೇಕ ಕಡೆಗಳಲ್ಲಿ ಬರುತ್ತೇನೆ. ಜಿಲ್ಲೆಯಲ್ಲಿ ಬಿಜೆಪಿ ಭರವಸೆ ಹೆಚ್ಚಿದ್ದು, ಜನತೆಯಿಟ್ಡಿರುವ ವಿಶ್ವಾಸ ಖುಷಿ ತಂದಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next