Advertisement

ಬಿಎಸ್‌ವೈ ತಾಳಕ್ಕೆ ಶೋಭಾ ಮೇಳ: ಸಿಎಂ ಟಾಂಗ್‌

03:00 AM Jul 14, 2017 | Team Udayavani |

ರಾಯಚೂರು (ಲಿಂಗಸುಗೂರು): ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ
ಭ್ರಮೆಯಲ್ಲಿದ್ದಾರೆ. ಅವರಪ್ಪನಾಣೆ ಯಡಿಯೂರಪ್ಪ ಮತ್ತೆ ಸಿಎಂ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ
ಪುನರುಚ್ಚರಿಸಿದ್ದಾರೆ. ಲಿಂಗಸುಗೂರು ನಗರದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಿಸ್ತಾರಕರ ಮೂಲಕ ಬಿಜೆಪಿ ಸಮಾಜದಲ್ಲಿ ಜಾತಿ ಬೀಜ ಬಿತ್ತಲು ಮುಂದಾಗಿದೆ. ಆ ಮೂಲಕ ಅಧಿಕಾರ ಹಿಡಿಯಲು ಮುಂದಾದ ಬಿಜೆಪಿಗೆ ವೈಫಲ್ಯ ಕಟ್ಟಿಟ್ಟ ಬುತ್ತಿ ಎಂದರು. ಬಿಜೆಪಿಯವರ ಬಾಯಿ ಬಡಾಯಿದ್ದಂತೆ. ಮಾಜಿ ಸಿಎಂ ಯಡಿಯೂರಪ್ಪ ಹೋದಲ್ಲೆಲ್ಲ ಬರೀ ಮಾತಾಡುತ್ತಿದ್ದಾರೆ.

Advertisement

ಅವರ ತಾಳಕ್ಕೆ ಶೋಭಾ ಕರಂದ್ಲಾಜೆ ಮೇಳದಂತಿದ್ದಾರೆ ಎಂದು ವ್ಯಂಗ್ಯವಾಡಿದರು. “ನಾವೂ ಹಿಂದುಗಳೇ. ನಾವು
ಶ್ರೀರಾಮ, ಆಂಜನೇಯ, ವಿಷ್ಣುವಿನ ಪೂಜೆ ಮಾಡುತ್ತೇವೆ. ಆದರೆ, ಬಿಜೆಪಿಯವರು ಹಿಂದುಗಳನ್ನು ಗುತ್ತಿಗೆ
ಪಡೆದವರಂತೆ ವರ್ತಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next