Advertisement

ಪರೇಶ್ ಕೊಲೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗ್ತಿದೆ: ಸಚಿವ ಹೆಗಡೆ

02:14 PM Dec 12, 2017 | Team Udayavani |

ಬೆಳಗಾವಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ರಾಕ್ಷಸ ಮುಖ. ಕಾಂಗ್ರೆಸ್ ನವರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಆಗ ರಾಕ್ಷಸ ಮುಖವೋ, ಮನುಷ್ಯತ್ವದ ಮುಖ ಇದೆಯೋ ಎಂದು ತಿಳಿಯುತ್ತದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

Advertisement

ಹೊನ್ನಾವರದಲ್ಲಿ ಪರೇಶ್ ಮೇಸ್ತನನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿದೆ. ಮೇಸ್ತ ಕೊಲೆ ಮಾನವೀಯತೆಯ ಕಗ್ಗೊಲೆ. ಇದು ಮನುಷ್ಯತ್ವವನ್ನು ಮರೆತು ನಡೆಸಿದ ಹೇಯ ಕೃತ್ಯ. ಆದರೆ ರಾಜ್ಯ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಶಿರಸಿ ಪಟ್ಟಣ ಬಂದ್ ವೇಳೆ ನಡೆದ ಹಿಂಸಾಚಾರ, ಲಾಠಿಚಾರ್ಜ್ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಂಗಳವಾರ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಸಮಾಜಘಾತುಕ ಶಕ್ತಿಗಳ ಜತೆ ಪೊಲೀಸರು ಶಾಮೀಲಾಗಿದ್ದಾರೆ. ರಾಜ್ಯದಲ್ಲಿ ಮೇಸ್ತ ಸೇರಿ 20 ಹಿಂದು ಯುವಕರ ಹತ್ಯೆಯಾಗಿದೆ ಎಂದು ದೂರಿದರು. ಉತ್ತರ ಕನ್ನಡ ಜಿಲ್ಲೆಯ ಜನ ಪ್ರಜ್ಞಾವಂತರಿದ್ದಾರೆ, ಯಾರೋ ಹೇಳಿದ ಮಾತನ್ನು ನಂಬಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next