Advertisement

ಇದು ಶರಣರ ನಾಡು,ಮೋದಿ ಅಲೆ ಇಲ್ಲಿ ವರ್ಕೌಟ್ ಆಗಲ್ಲ;ಅಬ್ಬರಿಸಿದ ಸಿಎಂ

05:34 PM Apr 07, 2017 | Team Udayavani |

ಗುಂಡ್ಲುಪೇಟೆ: ಕ್ಷೇತ್ರದಲ್ಲಿ ಉಪಚುನಾವಣಾ  ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Advertisement

ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಮೋದಿ ಶೈಲಿಯಲ್ಲಿ ಹೇಳಿದ ಸಿದ್ದರಾಮಯ್ಯ ಇವರಿಗೆ ಮುಸ್ಲಿಂಮರು ಬೇಡ, ಅಲ್ಪಸಂಖ್ಯಾತರು ಯಾರೂ ಬೇಡ ಇವರದ್ದು ಡೊಂಗಿ ರಾಜಕಾರಣ ಎಂದು ಕಿಡಿಕಾರಿದರು.

ಇದು ಶರಣರ ನಾಡು  ಮೋದಿ ಅಲೆ ಇಲ್ಲಿ ನಡೆಯುವುದಿಲ್ಲ ಎಂದು ಕಿಡಿ ಕಾರಿ,ಬಿಎಸ್‌ವೈ ಮುಖ್ಯಮಂತ್ರಿಯಾದರೆ ಅಚ್ಛೇ ದಿನ್‌ ಬರುತ್ತಾ ? ಅದನ್ನು ಹೇಳಿದವರು ಮೋದಿ. ಮೋದಿಗೂ ಯಡಿಯೂರಪ್ಪಗೂ ಏನು ಸಂಬಂಧ ಎಂದರು. 

ಅಧಿಕಾರಕ್ಕೆ ಬಂದು 3 ತಿಂಗಳ ಒಳಗೆ ರೈತರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರು? ಸಾಲ ಮನ್ನಾ ಮಾಡಿ ಎಂದು ನಾವು ಕೇಳಿದಾಗ,ನಾವು ನೋಟ್‌ ಪ್ರಿಂಟ್‌ ಮಾಡುವುದಿಲ್ಲ ಎಂದಿದ್ದು ಯಾರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ನಾನು ಅಧಿಕಾರಕ್ಕೆ ಬಂದ ಬಳಿಕ ಜನತೆಗೆ ಹಲವು ಭಾಗ್ಯ ಕೊಟ್ಟಿದ್ದೇನೆ. ಯಡಿಯೂರಪ್ಪ ಏನು ಕೊಟ್ಟಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಮತ ನೀಡ ಬೇಡಿ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next