Advertisement

CM ಗರಂ; ಬಂದಿರೋರು ಹತ್ತತ್ತು ವೋಟ್ ಹಾಕ್ಸಿದ್ರೆ ನಿಮ್ ಮಂಜಣ್ಣ ಮಂತ್ರಿಯಾಗ್ತಿದ್ದ

10:06 PM Jun 10, 2023 | Team Udayavani |

ಹುಣಸೂರು: ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ಶಕ್ತಿ ತುಂಬುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

Advertisement

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಅಭಿಮಾನಿಗಳು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಶನಿವಾರ ಸಂಜೆ ಮುಖ್ಯಮಂತ್ರಿಗಳ ಮೈಸೂರು ನಿವಾಸಕ್ಕೆ ತೆರಳಿ ಸೋತಿರುವ ಮಂಜುನಾಥರಿಗೆ ಎಂ.ಎಲ್.ಸಿ.ಸ್ಥಾನ ಕಲ್ಪಿಸಬೇಕೆಂದು ಮಾಡಿದ ಮನವಿಗೆ ಗರಂ ಆದ ಸಿಎಂ, ಗೆಲ್ಲಿಸಿದ್ದರೆ ಮಂತ್ರಿಯಾಗ್ತಿದ್ದ, ನೀವು ಮಂಜುನಾಥನನ್ನು ಸೋಲಿಸಿ ಬಂದಿದ್ದೀರಾ, ಇಲ್ಲಿ ಬಂದಿರುವ ಒಬ್ಬೊಬ್ಬರು ಹತ್ತು ಓಟ್ ಹಾಕಿಸಿದ್ದರೂ ಗೆಲ್ತಿದ್ದ, ರಾಜ್ಯದಲ್ಲಿ ಸೋತವರು 90 ಮಂದಿ ಇದ್ದಾರೆ, ಎಲ್ಲರಿಗೂ ಎಂಎಲ್ಸಿ ಸಾಧ್ಯವಿಲ್ಲ, ಆದರೂ ಈ ಮಂಜುಗೆ ಉನ್ನತ ಹುದ್ದೆ ಕೊಡಿಸುವ ಜವಾಬ್ದಾರಿ ನನ್ನದು ಎಂದು ಮುಖಂಡರಿಗೆ ಆಶ್ವಾಸನೆ ನೀಡಿದರು.

ಮುಖ್ಯಮಂತ್ರಿಗಳೊಂದಿಗೆ ಸಚಿವ ಕೆ.ವೆಂಕಟೇಶ್,ಶಾಸಕ ರವಿಶಂಕರ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿಇ.ಜೆ.ವಿಜಯಕುಮಾರ್ ಇದ್ದರು.

ಈ ವೇಳೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್, ಬ್ಲಾಕ್ ಅಧ್ಯಕ್ಷರಾದ ನಾರಾಯಣ್, ಕಲ್ಕುಣಿಕೆರಮೇಶ್, ಮಂಜುಳ, ಶೋಭಾ, ಕಾರ್ಯಾಧ್ಯಕ್ಷರಾದ ಬಸವರಾಜಪ್ಪ, ಪುಟ್ಟರಾಜು, ನಗರಸಭೆ ಸದಸ್ಯೆ ಸೌರಭ ಸಿದ್ದರಾಜು, ಮಾಜಿ ಅಧ್ಯಕ್ಷೆ ಸುನಿತಾಜಯರಾಮೇಗೌಡ, ಜಿ.ಪಂ.ಮಾಜಿ ಸದಸ್ಯ ಕುನ್ನೇಗೌಡ, ಉದ್ಯಮಿಗಳಾದ ರಾಜುಶಿವರಾಜೇಗೌಡ, ಕೃಷ್ಣ, ಮುಖಂಡರಾದ ಬಿ.ಎನ್.ಜಯರಾಂ, ಮಂಡ್ಯಮಹೇಶ್, ನೇರಳಕುಪ್ಪೆಮಹದೇವ್, ಕುಮಾರ್, ಅಜ್ಗರ್‌ಪಾಷಾ, ಲೋಕೇಶ್, ಹೊನ್ನಪ್ಪ, ಚಿಲ್ಕುಂದನಾಗರಾಜ್ ಮತ್ತಿತರರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next