Advertisement

ಶೀಘ್ರವೇ ಸರ್ಕಾರಿ ನೌಕರಿಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಪ್ರಮೋದ್ ಸಾವಂತ್

04:26 PM Oct 09, 2021 | Team Udayavani |

ಪಣಜಿ: ರಾಜ್ಯದಲ್ಲಿ ಸರ್ಕಾರಿ ನೌಕರಿಯ 8000 ಖಾಲಿ ಹುದ್ದೆಗಳಿಗಾಗಿ ಜಾಹೀರಾತು ನೀಡಲಾಗಿದ್ದು, ಈ ಪೈಕಿ 2000 ಸರ್ಕಾರಿ ನೌಕರಿಯನ್ನು ಕೂಡಲೇ ಭರ್ತಿ ಮಾಡಲು ಇನ್ನೊಂದು ವಾರದಲ್ಲಿ ಜಾಹೀರಾತು ನೀಡಲಾಗುವುದು. ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೊಳ್ಳುವ ಮುನ್ನ ಈ ಖಾಲಿ ಹುದ್ಧೆಯನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.

Advertisement

ಸರ್ಕಾರಿ ನೌಕರಿ ವಿಷಯಕ್ಕೆ ಸಂಬಂಧಿಸಿದಂತೆ ಪಣಜಿಯಲ್ಲಿ ಬೈಠಕ್ ನಡೆಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ನೀಡಿದ ಭರವಸೆಯಂತೆಯೇ ಇದುವರೆಗೂ 8000 ಹುದ್ದೆ ಭರ್ತಿಗಾಗಿ ಜಾಹೀರಾತು ನೀಡಲಾಗಿದೆ. ಇನ್ನು ಎರಡು ಸಾವಿರ ಹುದ್ಧೆ ಭರ್ತಿಗಾಗಿ ಇನ್ನೊಂದು ವಾರದಲ್ಲಿ ಜಾಹೀರಾತು ನೀಡಿ ನೌಕರಿ ಭರ್ತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.

ಕೇಂದ್ರ ಸರ್ಕಾರವು ಗೋವಾ ಮುಕ್ತಿ ದಿನದ 60 ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಗೋವಾಕ್ಕೆ 300 ಕೋಟಿ ರೂಗಳನ್ನು ಮಂಜೂರು ಮಾಡಿದೆ. ಈ ಪೈಕಿ 150 ಕೋಟಿ ರೂ ಹಣ ನಮ್ಮ ಕೈ ಸೇರಿದೆ. ಈ ನಿಧಿಯಿಂದ ಪಂಚಾಯತಿಯ ಹಲವು ಯೋಜನೆಗಳಿಗೆ 50 ಕೋಟಿ ರೂ ಮತ್ತು ಪಾಲಿಕೆಗಳಿಗಾಗಿ 1 ಕೋಟಿ ರೂ ನಿಧಿಯನ್ನು ಡಿಸೆಂಬರ್ 19 ರ ಒಳಗಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next