Advertisement

ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ

07:52 PM Sep 16, 2021 | Team Udayavani |

ಹುಬ್ಬಳ್ಳಿ:  ತಮ್ಮೊಂದಿಗೆ ಒಂದು ಸೆಲ್ಫಿ ಬೇಕು ಎಂದು ಬೇಡಿಕೆಯಿಟ್ಟ ಎಂಟನೇ ತರಗತಿಯ ವಿದ್ಯಾರ್ಥಿನಿಯರಿಬ್ಬರ ಆಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಷಿಯಿಂದ  ಈಡೇರಿಸಿದರು.

Advertisement

ಗುರುವಾರ ಮುಖ್ಯಮಂತ್ರಿಯವರು ನಗರದ ನಿವಾಸಕ್ಕೆ ಆಗಮಿಸಿದ ವಿಷಯ ತಿಳಿದು ದೇಶಪಾಂಡೆ ನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿಯರಾದ ತ್ರಿವೇಣಿ ಹಾಲಾಪುರ ಹಾಗೂ ಶ್ರೇಯಾ ಪ್ರಭು ಇಲ್ಲಿನ ವಿಶ್ವೇಶ್ವರ ನಗರದ ನಿವಾಸಕ್ಕೆ ಆಗಮಿಸಿದ್ದರು. ಫೋಟೋಗಾಗಿ  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರ ನಿವಾಸದ ಮುಂದೆ ಕಾದಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ನಂತರ ಹೊರಡುತ್ತಿದ್ದ ವೇಳೆ ನೇರವಾಗಿ ಮುಖ್ಯಮಂತ್ರಿಗಳ ಬಳಿಗೆ ಹೋಗಿ ವಿದ್ಯಾರ್ಥಿನಿಯರು ಸೆಲ್ಫಿಯ ಇಂಗಿತ ವ್ಯಕ್ತಪಡಿಸಿದರು.

ಬೊಮ್ಮಾಯಿ ಅವರು ವಿದ್ಯಾರ್ಥಿಗಳ ಇಚ್ಛೆಗೆ ಸ್ಪಂದಿಸಿ ಖುಷಿಯಿಂದಲೇ ಫೋಟೋಗೆ ಫೋಸ್ ನೀಡಿದರು.  ಮುಖ್ಯಮಂತ್ರಿಯೊಂದಿಗೆ ಸೆಲ್ಫಿ ದೊರೆತ ಖುಷಿಗೆ ಪರಾರವೇ ಇರಲಿಲ್ಲ. ಮುಖ್ಯಮಂತ್ರಿ ಅವರ ಸರಳತೆ ನೆರಿದಿದ್ದವರಲ್ಲಿ ಅಚ್ಚರಿ ಹಾಗೂ ಸಂತಸ ಮೂಡಿಸಿತು. ವಿದ್ಯಾರ್ಥಿನಿಯರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ ಅವರು ಚನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕು ಎಂದು ಹಾರೈಸಿದರು. ನಂತರ ನಿವಾಸಕ್ಕೆ ಆಗಮಿಸಿದ ಜನರಿಂದ ಅಹವಾಲು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next