Advertisement

ಮಳೆಯಿಂದಾಗುವ ಅನಾಹುತ ತಪ್ಪಿಸಲು ಡಿಸಿ, ಜಿಲ್ಲಾ ಉಸ್ತುವಾರಿಗಳ ಜೊತೆ ಸಿಎಂ ಸಭೆ

02:38 PM Jun 19, 2021 | Team Udayavani |

ಬೆಂಗಳೂರು : 20 ಜಿಲ್ಲೆಗಳ ಡಿಸಿ, ಜಿಲ್ಲಾ‌ ಉಸ್ತುವಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಮುಂಗಾರಿನ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಮಳೆಯಿಂದ ಆಗುವ ಅನಾಹುತದ ಬಗ್ಗೆ ಚರ್ಚೆ ಮಾಡಿ‌ ಸಲಹೆ ಕೊಟ್ಟಿದ್ದೇವೆ. ಇನ್ನೂ ಅತಿ ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಆಗುವ ಅನಾಹುತ ತಪ್ಪಿಸಬೇಕು. ಮುಂಗಾರು ಬೇಗ ಆರಂಭ ಆಗಿದೆ. ಕೆರೆ ಕಟ್ಟೆಗಳು ತುಂಬುವ ಹಂತದಲ್ಲಿವೆ. ಬಿತ್ತನೆ ಕಾರ್ಯ ಆಗುತ್ತಿದೆ. ಮುಂದಾಗುವ ಅನಾಹುತಗಳ ತಪ್ಪಿಸುವಂತೆ ಎಚ್ಚರಿಕೆ ನೀಡಿದ್ದೇವೆ ಎಂದರು.

ಮುಳುಗಡೆ ಪ್ರದೇಶದಲ್ಲಿರುವವರನ್ನು ಸ್ಥಳಾಂತರ ಮಾಡೋಕೆ ಸೂಚಿಸಿದ್ದೇನೆ. ಎನ್‌ ಡಿ ಆರ್‌ ಎಫ್, ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿ ಕೊಟ್ಟಿರುವ ಪ್ರಧಾನಿಯವರಿಗೆ ಧನ್ಯವಾದ ಹೇಳ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next