Advertisement

ಜೆಡಿಎಸ್‌ ಗೆದ್ದರೆ ಗೋಹತ್ಯೆ ನಿಷೇಧ ತೆರವು: ಸಿಎಂ ಇಬ್ರಾಹಿಂ 

10:38 PM May 08, 2023 | Team Udayavani |

ಹುಮನಾಬಾದ್‌: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮರಳಿ ಮೀಸಲಾತಿ ನೀಡುತ್ತೇವೆ. ಗೋಹತ್ಯೆ ನಿಷೇಧ ತೆರವು ಮಾಡುತ್ತೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

Advertisement

ಗೋಹತ್ಯೆ ನಿಷೇಧ ಕುರಿತು ವಿಧಾನಸೌಧದಲ್ಲಿ ಕಾಂಗ್ರೆಸ್‌ ಯಾವತ್ತೂ ಮಾತನಾಡಿಲ್ಲ. ವಿಧಾನಸೌಧ ಎದುರು ಈಶ್ವರಪ್ಪ ಅವರು ಗೋವಿಗೆ ಪೂಜೆ ಮಾಡುವ ಕೆಲಸ ಮಾಡಿದ್ದಾರೆ. ನಮ್ಮ ಸರಕಾರ ಬಂದರೆ ಕಾನೂನು ಬದಲಾಗುತ್ತೆ. ಎಲ್ಲ ಅಂಗಡಿಗಳಿಗೂ ಲೈಸನ್ಸ್‌ ಕೊಡುತ್ತೇವೆ. ಯಾವುದೇ ಜಾನುವಾರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಸಂದರ್ಭ ಯಾರೂ ತಡೆಯದಂತೆ ಕಾನೂನು ರೂಪಿಸುತ್ತೇವೆ ಎಂದು ತಿಳಿಸಿದರು.

ಹಣ ನೀಡಿ ಖರೀದಿ ಮಾಡಿದ ಗೋವಿಗೆ ರೈತ ಐದು ವರ್ಷ ಬಳಿಕ ಏನು ಮಾಡಬೇಕು. ಉತ್ತರ ಪ್ರದೇಶದ ಸಂಸದರು ಕಸಾಯಿಖಾನೆ ನಡೆಸುತ್ತಾರೆ. ಅಲ್ಲಿ ಯಾಕೆ ಇಂಥ ಕಾನೂನು ಇಲ್ಲ ಎಂದು ಪ್ರಶ್ನಿಸಿದ ಅವರು, ವಯಸ್ಸಾದ ಜಾನುವಾರುಗಳನ್ನು ಮನೆಯಲ್ಲಿ ಇಟ್ಟುಕೊಂಡು ಪ್ರಾರ್ಥನೆ ಮಾಡಬೇಕಾ ಎಂದು ಪ್ರಶ್ನಿಸಿದರು.

ಹಿಜಾಬ್‌ ವಿಷಯದಲ್ಲಿ ಮುಸ್ಕಾನ್‌ ಎಂಬ ಯುವತಿ “ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಸಂದರ್ಭ ಅನೇಕರು ಆಕೆಯನ್ನು ಹೆದರಿಸುವ ಕೆಲಸ ಮಾಡಿದ್ದರು. ನಮ್ಮ ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ಮಾತನಾಡಿದ್ದೇನೆ. ಯುವತಿ ಮನೆಗೆ ಹೋಗಿ, ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಆ ಸಂದರ್ಭ ಯುವತಿ ಮಾತನಾಡಿ “ನಾನು ಒಂದು ಬಾರಿ ಮಾತ್ರ ಅಲ್ಲಾನ ಹೆಸರು ಹೇಳಿದ್ದೇನೆ. ಅದು ದೇಶದ ಎಲ್ಲರ ಬಾಯಿಯಲ್ಲಿ ಹೇಳುವಂತೆ ಮಾಡಿದೆ’ ಎಂದು ಹೆಮ್ಮೆಯಿಂದ ತಿಳಿಸಿದ್ದಾಳೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next