Advertisement
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ, ಮೇ 31ಕ್ಕೆ ಯಶಸ್ವಿನಿ ಯೋಜನೆ ಮುಗಿಯಲಿದೆ ಎಂದು ರೈತ ಮುಖಂಡರು ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಸಿಎಂ ಕುಮಾರಸ್ವಾಮಿ, ಮಂಗಳವಾರ ಆರೋಗ್ಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಯಶಸ್ವಿನಿ ಯೋಜನೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
Related Articles
ಯಶಸ್ವಿನಿ ಗ್ರಾಮೀಣ, ನಗರ ಸಹಕಾರಿಗಳ ಆರೋಗ್ಯ ರಕ್ಷಕ ಯೋಜನೆ. ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ ಸಹಾಯ ಗುಂಪಿನ ಸದಸ್ಯ, ಸಹಕಾರ ಸಂಘದಸದಸ್ಯ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಗಳಾಗಬಹುದು.
Advertisement
ಯೋಜನೆಯಡಿ 525 ನೆಟ್ವರ್ಕ್ ಆಸ್ಪತ್ರೆಗ ಳಲ್ಲಿ 823 ಶಸ್ತ್ರಚಿಕಿತ್ಸೆ ಸೌಲಭ್ಯ ಪಡೆಯಬಹುದಾ ಗಿತ್ತು. ಸರ್ಕಾರವೇ ಆಸ್ಪತ್ರೆಗಳಿಗೆ ಹಣ ಪಾವತಿ ಸುತ್ತಿತ್ತು. 2003ರಿಂದ ಜಾರಿಗೆ ಬಂದ ಯಶಸ್ವಿ ನಿಯಲ್ಲಿ ಗ್ರಾಮೀಣ ಭಾಗದಲ್ಲಿ ವಾರ್ಷಿಕ 250ರೂ. ವಂತಿಗೆ ಪಾವತಿಸಿ ವರ್ಷದಲ್ಲಿ ಒಂದು ಬಾರಿ ಗರಿಷ್ಠ ಮಿತಿ 1.25 ಲಕ್ಷ ರೂ.ವರೆಗಿನ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು. ವರ್ಷದಲ್ಲಿ 2 ಬಾರಿ ಚಿಕಿತ್ಸೆಗೆ ದಾಖಲಾಗುವ ಪ್ರಸಂಗ ಬಂದರೆ ನಗದು ರಹಿತ ಮಿತಿ 2 ಲಕ್ಷ ರೂ.ವರೆಗೆ ಇದೆ.