Advertisement

ಸಿಎಂ ದಾವೋಸ್ ಪ್ರವಾಸ ಮೊಟಕು?; ಇಂದು ದಿಲ್ಲಿಗೆ ಹಠಾತ್ ಭೇಟಿ!

01:15 PM May 20, 2022 | Team Udayavani |

ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರ ದಾವೋಸ್ ಪ್ರವಾಸ ಇನ್ನೂ ಅನುಮಾನಾಸ್ಪದವಾಗಿದ್ದು, ಇಂದು ದಿಲ್ಲಿಗೆ ಹಠಾತ್ ಭೇಟಿ ನೀಡಲಿದ್ದಾರೆಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Advertisement

ವರಿಷ್ಠರ ಕರೆಯ ಮೇರೆಗೆ ಇಂದು ಸಂಜೆ ಸಿಎಂ ದಿಲ್ಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಇಂದಿನ‌ ಎಲ್ಲ ಕಾರ್ಯಕ್ರಮ ರದ್ಧುಗೊಳಿಸಲಾಗಿದೆ.ಸಿಎಂ ದಾವೋಸ್ ಪ್ರವಾಸ ಹಿನ್ನೆಲೆಯಲ್ಲಿ ದಿಲ್ಲಿಗೆ‌ ತೆರಳುತ್ತಿದ್ದಾರೆ ಎಂಬ ಮಾತಿನ ಮಧ್ಯೆಯೇ ಸಂಪುಟ ವಿಸ್ತರಣೆ ಮತ್ತು ನಾಯಕತ್ವ ಬದಲಾವಣೆ ಚರ್ಚೆಗೆ ಬಲ‌ ಬಂದಿದೆ.

ಮಧ್ಯಾಹ್ನ 2.30  ಕ್ಕೆ ಸಿಎಂ ದಿಲ್ಲಿಗೆ ತೆರಳಲ್ಲಿದ್ದು, ಸಂಜೆಯೇ ವಾಪಾಸ್ ಆಗಲಿದ್ದಾರೆ. ವಿದೇಶ ಪ್ರವಾಸದ ಹೊಸ್ತಿಲಲ್ಲಿ ಹೈಕಮಾಂಡ್ ಬುಲಾವ್ ಏಕೆ ಎಂಬುದು‌ ಕುತೂಹಲಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಗುರುವಾರ ರಾತ್ರಿ ಸಚಿವ ಸಿ.ಸಿ.ಪಾಟೀಲ್ ನಿವಾಸದಲ್ಲಿ ಸಿಎಂ, ಬೊಮ್ಮಾಯಿ ಹಾಗೂ ಆಪ್ತ ಸಚಿವರು ಭೇಟಿ ಮಾಡಿರುವುದು ಇನ್ನಷ್ಟು ಕುತೂಹಲ ಸೃಷ್ಟಿಸಿದೆ.

ಇದನ್ನೂ ಓದಿ : ಕುರಿ ಹಟ್ಟಿಯ ಸೋಲಾರ್ ಬೆಳಕಿನಲ್ಲಿ ಓದಿದ್ದ ಪರಶುರಾಮ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next