Advertisement

ಆತ್ಮೀಯ ಗೆಳೆಯನ ಅಗಲಿಕೆ: ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

11:14 AM Sep 16, 2021 | Team Udayavani |

ಹುಬ್ಬಳ್ಳಿ: ಆತ್ಮೀಯ ಗೆಳೆಯ ರಾಜು ಪಾಟೀಲ ಅಗಲಿಕೆಯನ್ನು ನೆನೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರಾದರು.

Advertisement

ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ಬೊಮ್ಮಾಯಿ ಅವರು ಶಕ್ತಿ ನಗರದಲ್ಲಿರುವ ರಾಜು ಪಾಟೀಲ ಅವರ ನಿವಾಸಕ್ಕೆ ಆಗಮಿಸಿ ಪಾರ್ಥಿವ ಶರೀರಕ್ಕೆ ನಮಿಸಿದರು. ಮನೆಗೆ ಆಗಮಿಸುತ್ತಿದ್ದಂತೆ ಗೆಳೆಯನನ್ನು ಪಾರ್ಥೀವ ಶರೀರ ಕಂಡು ಬಿಕ್ಕಳಿಸಿ ಅತ್ತರು.

ಇದನ್ನೂ ಓದಿ:ದೇವಸ್ಥಾನ ನೆಲಸಮ ವಿಚಾರದ ಬಗ್ಗೆ ಎರಡು ದಿನದಲ್ಲಿ ತೀರ್ಮಾನ: ಸಚಿವ ಸೋಮಶೇಖರ್

ಮನೆಯ ಮುಂಭಾಗದಲ್ಲಿ ಸ್ನೇಹಿತರೊಂದಿಗೆ ಕುಳಿತು ಹಿಂದಿನ ನೆನಪುಗಳನ್ನು ಮೆಲಕು ಹಾಕಿದರು. ಹಿಂದಿನ ಸಂಗತಿಗಳನ್ನು ನೆನಪಿಸಿಕೊಳ್ಳುವಾಗ ಕಣ್ಣೀರು ಹಾಕುತ್ತಿದ್ದರು. ಸಿಎಂ ಪತ್ನಿ ಹಾಗೂ ಪುತ್ರ ಕೂಡ ಆಗಮಿಸಿದ್ದಾರೆ.

ರಾಜು ಪಾಟೀಲ ಗೆಳೆಯ ಹಾಗೂ ಸೋದರ ಸಂಬಂಧಿಯಾಗಿದ್ದಾರೆ. ಬುಧವಾರ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next