Advertisement

ಅ. 21: ಕೊಡಗಿನಲ್ಲಿ ಕಾವೇರಿ ನದಿ ಉತ್ಸವ,  ಮುಖ್ಯಮಂತ್ರಿ ಉಪಸ್ಥಿತಿ

03:59 PM Sep 22, 2022 | Team Udayavani |

ಮಡಿಕೇರಿ: ಕಳೆದ ವರ್ಷ ಕಾರಣಾಂತರಗಳಿಂದ ಮುಂದೂಲ್ಪಟ್ಟಿದ್ದ ಕಾವೇರಿ ನದಿ ಉತ್ಸವ ಅ. 21ರಂದು ಕೊಡಗಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

Advertisement

ಶಾಸಕ‌ರಾದ ಎಂ.ಪಿ. ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ. ಬೋಪಯ್ಯ ನೇತೃತ್ವದ ಕಾವೇರಿ ನದಿ ಸ್ವತ್ಛತಾ ಆಂದೋಲನ ಸಮಿತಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕಾವೇರಿ ನದಿ ಉತ್ಸವದಲ್ಲಿ ಪಾಲ್ಗೊ ಳ್ಳುವಂತೆ ಮನವಿ ಮಾಡಿತು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ಅವರನ್ನು ಕೂಡ ನಿಯೋಗ ಇದೇ ಸಂದರ್ಭ ಭೇಟಿ ನೀಡಿತು.

ಅ. 21ರಂದು ತಲಕಾವೇರಿ, ಭಾಗಮಂಡಲ, ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಉತ್ಸವ ನಡೆಸುವ ಬಗ್ಗೆ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next