Advertisement

ಮಲ್ಪೆ: ಬಸ್‌ ತಂಗುದಾಣದ ಅವಶೇಷ ತೆರವು

11:39 AM Sep 06, 2022 | Team Udayavani |

ಮಲ್ಪೆ: ಅಪಾಯದ ಸ್ಥಿತಿಯಲ್ಲಿದ್ದ ಬಸ್ಸು ತಂಗುದಾಣದ ಅವಶೇಷಗಳನ್ನು ನಗರಸಭೆ ಅಲ್ಲಿಂದ ತೆರವುಗೊಳಿಸುವ ಮೂಲಕ ಕೊನೆಗೂ ಮುಕ್ತಿ ದೊರಕಿಸಿದ್ದಾರೆ.

Advertisement

ಮಲ್ಪೆ ಮುಖ್ಯರಸ್ತೆ ಹಳೆ ಪೋಸ್ಟ್‌ ಆಫೀಸಿನ ಬಳಿ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದ್ದ ಬಸ್‌ ತಂಗುದಾಣವನ್ನು ತಿಂಗಳ ಹಿಂದೆ ನಗರಸಭೆ ಕೆಡವಿದರೂ ಅದರ ಕಾಂಕ್ರೀಟ್‌ ಸ್ಲ್ಯಾಬ್‌, ಪಿಲ್ಲರ್‌ಗಳನ್ನು ತೆರವುಗೊಳಿಸದೆ ಅಲ್ಲೆ ಬಿಟ್ಟು ಹೋಗಿರುವುದು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡಿತ್ತು. ಕಾಂಕ್ರೀಟ್‌ ಒಳಗಿದ್ದ ಕಬ್ಬಿಣದ ರಾಡ್‌ಗಳು ಕಾಂಕ್ರೀಟ್‌ ನೊಂದಿಗೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದು ಇದರಿಂದ ಇಲ್ಲಿ ಬಸ್‌ ಕಾಯಲು ಬಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು.

ಈ ಬಗ್ಗೆ ಉದಯವಾಣಿ ಸೆ. 4ರ ರವಿವಾರದ ಸುದಿನದಲ್ಲಿ ಬಸ್‌ ತಂಗುದಾಣ ಕೆಡವಿದರೂ ಇನ್ನೂ ತೆರವಾಗದ ಅವಶೇಷಗಳು ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟವಾಗಿತ್ತು. ತತ್‌ಕ್ಷಣ ಎಚ್ಚೆತ್ತ ಇಲಾಖೆ ವರದಿಗೆ ಸ್ಪಂದಿಸಿ ಸೋಮವಾರ ಬೆಳಗ್ಗಿನಿಂದಲೇ ಸ್ಲ್ಯಾಬ್‌ ಅನ್ನು ತುಂಡರಿಸಿ ಮತ್ತು ಕಬ್ಬಿಣದ ರಾಡ್‌ ಗಳನ್ನು ಬೇರ್ಪಡಿಸುವ ಮೂಲಕ ತೆರವು ಕಾರ್ಯ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next