Advertisement

ಮನೆ, ಜಮೀನು ಸ್ವಾಧೀನ ತೆರವು

04:16 PM Sep 15, 2021 | Team Udayavani |

ಗುಡಿಬಂಡೆ: ಹೈಕೋರ್ಟ್‌ ಆದೇಶದಂತೆ ಹತ್ತಾರು ವರ್ಷಗಳಿಂದ ಗುಂಡ್ಲಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ವಸತಿ ಕಟ್ಟಡ, ಜಮೀನು ಸ್ವಾಧೀನವನ್ನು ಉಪವಿಭಾಗಾ ಕಾರಿ ರಘುನಂದನ್‌ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

Advertisement

ತಾಲೂಕು ಎಲ್ಲೋಡು ಗ್ರಾಪಂಗೆ ಸೇರಿದ ಗುಂಡ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ 203ರಲ್ಲಿನ 1 ಎಕರೆ ಜಮೀನು ತೆರವು ಮಾಡಿ ಸ್ವಾಧೀನ ದಾರರಿಗೆ ನೀಡಬೇಕು ಎಂದು ಹೈಕೋರ್ಟ್‌ ಎಸಿಗೆ ಸೂಚಿಸಿತ್ತು. ಅದರಂತೆ ವಸತಿ ಮನೆಗಳು ನಿರ್ಮಾಣ ಮಾಡಿಕೊಂಡಿದ್ದ ನಾಲ್ವರಿಗೆ ಮತ್ತು ಉಳಿಕೆ ಜಮೀನಿನ ಹಾಲಿ ಸ್ವಾಧೀನದಾರರಿಗೆ ನೋಟಿಸ್‌ ನೀಡಲಾಗಿತ್ತು. ಆದರೂ, ತೆರವು ಮಾಡಿರಲಿಲ್ಲ. ಹೀಗಾಗಿ ತಹಶೀಲ್ದಾರ್‌ ಸಿಗ್ಬತುಲ್ಲಾ, ಸಿಪಿಐ ಲಿಂಗರಾಜು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮನೆ ತೆರವುಗೊಳಿಸುವಂತೆ 4 ದಿನ ಕಾಲಾವಕಾಶ ಕೊಟ್ಟಿದ್ದರು. ಆದರೂ, ತೆರವು ಗೊಳಿಸದ ಕಾರಣ ಮಂಗಳವಾರ ಚಿಕ್ಕಬಳ್ಳಾಪುರ ಎಸಿ ರಘುನಂದನ್‌ ನೇತೃತ್ವದಲ್ಲಿ, ಪೊಲೀಸ್‌ ರಕ್ಷಣೆಯಲ್ಲಿ ವಾಸವಿದ್ದ ನಾಲ್ಕು ಮನೆ ಹೊರತು ಪಡಿಸಿ 0-34 ಗುಂಟೆ ಜಮೀನು ಸ್ವತ್ತಿನ ಸ್ವಾಧೀನ ತೆರವುಗೊಳಿಸಿದರು.

ಇದನ್ನೂ ಓದಿ:ಶಿಕ್ಷಣವಿಲ್ಲದೇ ಕಾಡಿನಲ್ಲಿ ಅಲೆಯುತ್ತಿದ್ದ ಹಾಡಿ ಮಕ್ಕಳ ಮನೆ ಬಾಗಿಲಿಗೇ ಬಂತು ಶಾಲೆ!

ಗುಂಡ್ಲಹಳ್ಳಿ ಗ್ರಾಮದ ವೆಂಕಟಶಿವಪ್ಪ ಹಾಗೂ ಅವರ ಮಗ ಸಂತೋಷ ದರಕಾಸ್ತ್ನಲ್ಲಿ ಮಂ ಜೂರಾಗಿದ್ದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದು, ಹಾಲಿ ಸ್ವಾ ಧೀನ ಇರುವವರನ್ನು ತೆರವು ಮಾಡಿಸಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ
ಮಾತನಾಡಿದ ಎಸಿ, ಹೈಕೋರ್ಟ್‌ ಆದೇಶದಂತೆ ಮನೆ ನಿರ್ಮಾಣ ಮಾಡಿಕೊಂಡಿ ರುವ ನಾಲ್ವರಿಗೆ ಮತ್ತು ಜಮೀನು ಸ್ವಾ ಧೀನದಾರರಿಗೆ ನೋಟಿಸ್‌ ನೀಡಲಾಗಿದ್ದರೂ, ಅವರು ತೆರವು ಗೊಳಿಸಿದ ಕಾರಣ, ಖುದ್ದು ತೆರವು ಮಾಡಲಾಗಿದೆ. ಹಾಲಿ ವಾಸ ಇರುವ ಮನೆಯವರು ತೆರವು ಮಾಡಲು ಕಾಲಾವಕಾಶ ಕೋರಿದ್ದರಿಂದ ಮಾನವೀಯ ದೃಷ್ಟಿಯಿಂದ ಅಂಗೀಕರಿಸಿ, ಈ ಮನವಿಗಳನ್ನು ಹೈಕೋರ್ಟ್‌ಗೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗಿದೆ.

ಮನೆ ಹೊರತು ಪಡಿಸಿ, ಉಳಿಕೆ ಜಮೀನನ್ನು ವೆಂಕಟಶಿವಪ್ಪಗೆ ವರ್ಗಾಯಿಸಲಾಗುವುದು ಎಂದರು. ಡಿವೈಎಸ್‌ಪಿ ವಾಸುದೇವ್‌, ತಹಶೀಲ್ದಾರ್‌ ಸಿಗ್ಬತುಲ್ಲಾ, ವೃತ್ತ ನಿರೀಕ್ಷಕ ಲಿಂಗರಾಜು, ರಾಜಸ್ವ ನಿರೀಕ್ಷಕ ಅಮರನಾರಾಯಣ ಇತರರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next