Advertisement

Kanpur: ಕಾನ್ಪುರದಲ್ಲಿ ಧ್ವನಿವರ್ಧಕಗಳ ತೆರವು

09:46 PM Nov 28, 2023 | Team Udayavani |

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 300ಕ್ಕೂ ಅಧಿಕ ಧ್ವನಿವರ್ಧಕಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಆದೇಶದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಧ್ವನಿವರ್ಧಕಗಳು ನಿಗದಿತ ಡೆಸಿಬಲ್‌ ಮಿತಿ ಮೀರಿ ಕಾರ್ಯನಿರ್ವಹಿಸುತ್ತಿದ್ದರಿಂದ ಶಬ್ದ ಮಾಲಿನ್ಯ ಏರ್ಪಡುತ್ತಿತ್ತು. ಈ ನಿಟ್ಟಿನಲ್ಲಿ ಅಂತಹ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಸರ್ಕಾರ ಸೂಚನೆ ನೀಡಿತ್ತು. ಅದರಂತೆ ನ.26ರಿಂದ ಪೊಲೀಸರು ಧ್ವನಿವರ್ಧಕ ತೆರವು ಅಭಿಯಾನ ನಡೆಸುತ್ತಿದ್ದು, ಕಾನ್ಪುರದಲ್ಲಿ ನಿಯಮ ಉಲ್ಲಂ ಸಿದ್ದ 300 ಮೈಕ್‌ಗಳನ್ನು ತೆರವು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next