Advertisement

ಮಾಜಿ ಯೋಧರಿಂದ ಮುದಗಲ್ಲ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯ

01:10 PM Mar 26, 2022 | Team Udayavani |

ಮುದಗಲ್ಲ: ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆ ಸ್ವಚ್ಛತಾ ಅಭಿಯಾನಕ್ಕೆ ದಿನೇ-ದಿನೇ ಹೆಚ್ಚಿನ ಬೆಂಬಲ ಸಿಗುತ್ತಿದ್ದು, ಈ ಸ್ವಚ್ಛತಾ ಅಭಿಯಾನಕ್ಕೆ ಮಾಜಿ ಯೋಧರ ತಂಡವು ಸಾಥ್‌ ನೀಡಿದೆ.

Advertisement

ಇತಿಹಾಸಿಕ ಕುರುಹು ಇರುವ ಸ್ಮಾರಕ, ಶಾಸನ, ಶೀಲ್ಪಗಳು, ಕೋಟೆ ಕೊತ್ತಲುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ತಿಂಗಳಿಂದ ಕೋಟೆ ಸ್ವಚ್ಛತೆಗೆ ಮುಂದಾಗಿರುವ ಮುದಗಲ್ಲ ಸಾರ್ವಜನಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಅಖೀಲ ಕರ್ನಾಟಕ ಮಾಜಿ ಯೋಧರ ಸಂಘದ ತಾಲೂಕಾಧ್ಯಕ್ಷ ವೀರನಗೌಡ ಪಾಟೀಲ್‌ ಬಯ್ನಾಪುರ ಹೇಳಿದರು.

ಈ ಸಂದರ್ಭಧಲ್ಲಿ ವಿರುಪಾಕ್ಷಯ್ಯ ಹಿರೇಮಠ, ದೊಡ್ಡಪ್ಪ ನಾಯಕ, ದೊಡ್ಡಪ್ಪ ವಾಲ್ಮೀಖೀ, ಜಾಫರ್‌ ಸಾಬ್‌, ಮಲ್ಲಿಕಾರ್ಜುನ, ರಾಯಪ್ಪ ನಾಯಕ, ಅಶೋಕಗೌಡ ಪಾಟೀಲ್‌, ನಾಗರಾಜ ಗಸ್ತಿ, ಮೈಬೂನ್‌ ಬಾರಿಗಿಡ, ಶಾನೂರ್‌, ಕರವೇ ಘಟಕಾಧ್ಯಕ್ಷ ಎಸ್‌. ಎ. ನಯೀಮ್‌, ಪೌಲ್‌ ರಾಜ್‌ ಎಮ್ಮಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next