Advertisement

ಟೀಮ್‌ ಸ್ವಚ್ಛ ಪುತ್ತೂರಿನಿಂದ ಸ್ವಚ್ಛತಾ ಅಭಿಯಾನ 

12:20 PM May 15, 2018 | Team Udayavani |

ನಗರ: ಟೀಮ್‌ ಸ್ವಚ್ಛ ಪುತ್ತೂರು ತಂಡದಿಂದ ರವಿವಾರ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪರಿಸರದಲ್ಲಿ ಸ್ವಚ್ಛತೆ ಅಭಿಯಾನ ನಡೆಯಿತು. ಸ್ವಚ್ಛತೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ  ಮೂಡಿಸುವ ಕೆಲಸವನ್ನೂ ಮಾಡಿತು. ಸ್ವಚ್ಛತಾ ಅಭಿಯಾನವನ್ನು ನಾಗರಿಕರಾದ ಉದಯ ಕುಮಾರ್‌ ಮತ್ತು ರಾಧಾಕೃಷ್ಣ ಭಟ್‌ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು.

Advertisement

ರಾಧಾಕೃಷ್ಣ ಭಟ್‌ ಮಾತನಾಡಿ, ಸಾರ್ವಜನಿಕರು ಕೇವಲ ಸ್ವಚ್ಛತೆ ಮಾಡುವುದನ್ನು ನಿಂತು ನೋಡಿದರೆ ಸಾಲದು. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛ  ಪುತ್ತೂರಿನ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಇದರಿಂದ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್‌ ಪರಿಕಲ್ಪನೆಗೆ ನಾವು ಕೈಜೋಡಿಸಲು ಸಾಧ್ಯ ಎಂದರು.

ಜಾಗೃತಿ
ಬಸ್‌ ನಿಲ್ದಾಣ ಪರಿಸರದ ಹೊಟೇಲ್‌, ಅಂಗಡಿ, ತಂಪು ಪಾನೀಯ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದ ಅಭಿಯಾನ ತಂಡವು ತಮ್ಮ ಉದ್ಯಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕಸವನ್ನು ಪರಿಸರದಲ್ಲಿ ಎಸೆಯದಂತೆ ಜಾಗೃತಿ ಮೂಡಿಸಬೇಕು ಎಂದು ಕರಪತ್ರಗಳನ್ನು ವಿತರಿಸಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸಿತು.

ಅಭಿಯಾನದಲ್ಲಿ ಟೀಮ್‌ ಸ್ವಚ್ಛ  ಪುತ್ತೂರು ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ಜಿ. ಕೃಷ್ಣ, ಸಂದೀಪ್‌ ಲೋಬೋ, ಕೃಷ್ಣ ಮೋಹನ್‌, ಡಾ| ಸದಾಶಿವ ಭಟ್‌, ಯುವ ಕಾರ್ಯಕರ್ತೆ ವಿಜೇತಾ ಬಲ್ಲಾಳ್‌, ಸುರೇಶ್‌ ಕಲ್ಲಾರೆ, ಜಯಪ್ರಕಾಶ್‌ ಆಚಾರ್ಯ, ಶಂಕರ್‌ ಮಲ್ಯ ಸೇರಿದಂತೆ ಮೊದಲಾದವರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next