Advertisement

ವಿದ್ಯಾರ್ಥಿನಿಯ ನೀರಿನ ಬಾಟಲಿಗೆ ಮೂತ್ರ ಸೇರಿಸಿದ ವಿದ್ಯಾರ್ಥಿಗಳು… ಪೋಷಕರ ಪ್ರತಿಭಟನೆ

05:08 PM Jul 31, 2023 | sudhir |

ರಾಜಸ್ತಾನ: ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿನಿಯೋರ್ವಳ ನೀರಿನ ಬಾಟಲಿಗೆ ಸಹಪಾಠಿಗಳು ಮೂತ್ರ ಬೆರೆಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ರಾಜಸ್ತಾನದ ಭಿಲ್ವಾಡ ಜಿಲ್ಲೆಯ ಲುಹಾರಿಯಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಬ್ಯಾಗ್ ನೊಳಗೆ ಇದ್ದ ಕುಡಿಯುವ ನೀರಿನ ಬಾಟಲಿಗೆ ತನ್ನದೇ ತರಗತಿಯ ಕೆಲ ವಿದ್ಯಾರ್ಥಿಗಳು ಮೂತ್ರ ಸೇರಿಸಿದ್ದಾರೆ ಆದರೆ ವಿಚಾರ ಗೊತ್ತಿರದ ವಿದ್ಯಾರ್ಥಿನಿ ಮಧ್ಯಾಹ್ನ ಊಟದ ವೇಳೆ ನೀರು ಕುಡಿದಿದ್ದಾಳೆ ಈ ವೇಳೆ ನೀರಿನಲ್ಲಿ ಮೂತ್ರ ಬೆರೆತಿರುವುದು ಕಂಡುಬಂದಿದೆ.

ಅಲ್ಲದೆ ತನ್ನ ಬ್ಯಾಗ್ ನೊಳಗೆ ಇರುವ ಪುಸ್ತಕದೊಳಗಿನ ಹಾಳೆಯೊಂದರಲ್ಲಿ ಲವ್ ಯೂ… ಎಂದು ಬರೆದಿದ್ದರು. ಈ ಪ್ರಕರಣದ ಕುರಿತು ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ ಆದರೆ ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಬಳಿಕ ಮನೆಗೆ ಬಂದ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರ ಬಳಿ ತನ್ನಗೆ ಆದ ತೊಂದರೆಯ ಬಗ್ಗೆ ಹೇಳಿಕೊಂಡಿದ್ದಾಳೆ.

ಈ ಕುರಿತು ಪೋಷಕರು ಹಾಗೂ ಗ್ರಾಮದ ಒಂದಷ್ಟು ಮಂದಿ ಕಾಲೇಜಿಗೆ ತೆರಳಿ ಪ್ರಾಂಶುಪಾಲರ ಬಳಿ ಘಟನೆಯನ್ನು ವಿವರಿಸಿದ್ದಾರೆ ಈ ವೇಳೆಯೂ ಪ್ರಾಂಶುಪಾಲರು ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಇದರಿಂದ ಕುಪಿತಗೊಂಡ ವಿದ್ಯಾರ್ಥಿನಿಯ ಪೋಷಕರು ಹಾಗೂ ಗ್ರಾಮಸ್ಥರು ಯುವಕ ಮನೆಗಳಿಗೆ ಕಲ್ಲೆಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರಾಂಶುಪಾಲರ ಕ್ರಮವನ್ನು ಖಂಡಿಸಿದ ಪೋಷಕರು ಕಾಲೇಜು ಬಳಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಯು ಪೊಲೀಸರಿಗೆ ಯಾವುದೇ ಅಧಿಕೃತ ದೂರು ನೀಡಿಲ್ಲ ಎಂದು ಎಎಸ್ಪಿ ಘನಶ್ಯಾಮ್ ಶರ್ಮಾ ತಿಳಿಸಿದ್ದಾರೆ. ಆರೋಪಿಗಳ ಜಾಗಕ್ಕೆ ನುಗ್ಗಿ ಕಲ್ಲು ತೂರಾಟ ನಡೆಸಿದವರ ವಿರುದ್ಧ ದೂರು ನೀಡಿದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

Advertisement

ಸದ್ಯ ಘಟನೆಗೆ ಸಂಬಂಧಿಸಿ ಪೋಲೀಸರ ತಂಡ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: WFI Elections: ನನ್ನ ಕುಟುಂಬದವರು ಯಾರೂ ನಾಮಪತ್ರ ಸಲ್ಲಿಸುತ್ತಿಲ್ಲ: ಬ್ರಿಜ್ ಭೂಷಣ್

Advertisement

Udayavani is now on Telegram. Click here to join our channel and stay updated with the latest news.

Next